Advertisement

ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನಕ್ಕೆ ವಿಶೇಷ ಪೂಜೆ

11:46 AM Aug 13, 2018 | Team Udayavani |

ನಂಜನಗೂಡು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 71ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಇಂದು ನಂಜನಗೂಡಿನ ಶ್ರೀಕಂಠೇಶ್ವರ ಹಾಗೂ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

Advertisement

ನಂತರ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲು ತರಿಸಿ ತಮ್ಮ ನಾಯಕ ಸಿದ್ದರಾಮಯ್ಯನವರಿಗೆ ಶುಭಹಾರೈಸಿದರು. ಈ ವೇಳೆ ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅದ್ಯಕ್ಷ ಎಸ್‌.ಸಿ.ಬಸವರಾಜು, ತಗಡೂರು ಬ್ಲಾಕ್‌ ಕಾಂಗ್ರೆಸ್‌ ಅದ್ಯಕ್ಷ ಹಾಡ್ಯ ರಂಗಸ್ವಾಮಿ, ತಾಪಂ ಉಪಾಧ್ಯಕ್ಷ ಹೆಜ್ಜಿಗೆ ಆರ್‌. ಗೋಂದರಾಜನ್‌, ಶ್ವಕರ್ಮ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎನ್‌.ನಂದಕುಮಾರ್‌,

ಪುರಸಭಾ ಮಾಜಿ ಉಪಾದ್ಯಕ್ಷ ಇಂದ್ರ, ಗ್ರಾ.ಪಂ ಅದ್ಯಕ್ಷರಾದ ಸುತ್ತೂರು ಸೋಮಣ್ಣ, ಮರಳೂರು ಬಿ.ಎಂ.ಮಹೇಶ್‌ ಕುಮಾರ್‌, ಚಿನ್ನಂಬಳ್ಳಿ ಸಿ.ಆರ್‌. ಮಹದೇವು, ಗ್ರಾ.ಪಂ ಸದಸ್ಯರಾದ ಹೆಬ್ಯಾ ರಾಜು, ಅಡಕನಹಳ್ಳಿ ಹುಂಡಿ ಮಾದಪ್ಪ, ಮಲ್ಲೀಪುರ ಪ್ರಕಾಶ್‌, ಮುಖಂಡರಾದ ಮಂಜುನಾಥ್‌, ಹೊಸಕೋಟೆ ಬಸವರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next