Advertisement

ವಿಶೇಷ ಗೆಲುವು: ಸುನೀಲ್‌ ಚೆಟ್ರಿ

01:05 AM Mar 19, 2019 | Team Udayavani |

ಬೆಂಗಳೂರು: “ನನ್ನ ಪಾಲಿಗೆ ಇದೊಂದು ವಿಶೇಷ ಗೆಲುವು’ ಎಂಬುದಾಗಿ ಮೊದಲ ಸಲ ಬೆಂಗಳೂರು ಎಫ್ಸಿ ತಂಡವನ್ನು “ಇಂಡಿಯನ್‌ ಸೂಪರ್‌ ಲೀಗ್‌’ ಫ‌ುಟ್‌ಬಾಲ್‌ ಚಾಂಪಿಯನ್‌ ಪಟ್ಟಕೇರಿಸಿದ ನಾಯಕ ಸುನೀಲ್‌ ಚೆಟ್ರಿ ಹೇಳಿದ್ದಾರೆ. 

Advertisement

ಮುಂಬಯಿಯಲ್ಲಿ ರವಿವಾರ ರಾತ್ರಿ ನಡೆದ ಪ್ರಶಸ್ತಿ ಕಾಳಗದ ಹೆಚ್ಚುವರಿ ಅವಧಿಯಲ್ಲಿ ಬೆಂಗಳೂರು ಎಫ್ಸಿ ತಂಡ ಗೋವಾ ಎಫ್ಸಿ ವಿರುದ್ಧ 1-0 ಅಂತರದ ಜಯ ಸಾಧಿಸಿತ್ತು.”ನನ್ನ ವೃತ್ತಿ ಬದುಕಿನಲ್ಲಿ ಈ ಜಯಕ್ಕೆ ದ್ವಿತೀಯ ಸ್ಥಾನ ನೀಡುತ್ತೇನೆ. ದೋಹಾದಲ್ಲಿ ನಡೆದ 2016ರ ಎಎಫ್ಸಿ ಕಪ್‌ ಫೈನಲ್‌ ಪಂದ್ಯಕ್ಕೆ ಮೊದಲ ಸ್ಥಾನ…’ ಎಂಬುದಾಗಿ ಐತಿಹಾಸಿಕ ಗೆಲುವಿನ ಬಳಿಕ “ಗೋಲ್‌ ಡಾಟ್‌ ಕಾಮ್‌’ಗೆ ನೀಡಿದ ಸಂದರ್ಶನದಲ್ಲಿ ಸುನೀಲ್‌ ಚೆಟ್ರಿ ಹೇಳಿದರು.

“ಕಳೆದ ವರ್ಷದ ಫೈನಲ್‌ನಲ್ಲಿ ನಾವು ಚೆನ್ನೈಯಿನ್‌ ಎಫ್ಸಿ ವಿರುದ್ಧ ಪರಾಭವಗೊಂಡಿದ್ದೆವು. ಆದರೆ ಈ ಬಗ್ಗೆ ನಾವು ಹೆಚ್ಚು ಚರ್ಚೆ ಮಾಡಲಿಲ್ಲ. ಮುಂದೊಂದು ದಿನ ನಮಗೂ ಗೆಲುವಿನ ಬಾಗಿಲು ತೆರೆಯುತ್ತದೆ ಎಂದು ಎಲ್ಲರೂ ನಂಬಿದ್ದರು. ಇದೀಗ ನಿಜವಾಗಿದೆ’ ಎಂದು ಚೆಟ್ರಿ ನುಡಿದರು.

ಈ ಜಯದಿಂದಾಗಿ ಬೆಂಗಳೂರು ಎಫ್ಸಿ ತಂಡಕ್ಕೆ 2020ರ ಎಎಫ್ಸಿ ಕಪ್‌ ಕೂಟದ ಗ್ರೂಪ್‌ ಹಂತದ ಪ್ರವೇಶ ಹಾದಿ ತೆರೆಯುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next