Advertisement

ಏ.3ರಿಂದ ವಿಶೇಷ ರೈಲು ಸಂಚಾರ

02:27 PM Mar 30, 2019 | Team Udayavani |

ಹುಬ್ಬಳ್ಳಿ: ರೈಲ್ವೆ ಮಂಡಳಿ ಏ.3ರಿಂದ ಜೂ.27ರವರೆಗೆ ಬಾಣಸವಾಡಿ-ಸಂಬಲಪುರ ಮಧ್ಯೆ ವಾರದ ಎಕ್ಸ್‌ಪ್ರೆಸ್‌ (08301/08302) ಒಟ್ಟು 13 ಟ್ರಿಪ್‌ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. ಪ್ರತಿ ಬುಧವಾರ ಸಂಬಲಪುರದಿಂದ ಸಂಜೆ 7:30ಕ್ಕೆ ಹೊರಡುವ ರೈಲು ಬಾಣಸವಾಡಿಗೆ ಗುರುವಾರ ಮಧ್ಯಾಹ್ನ 1:30ಕ್ಕೆ ಬಂದು ಸೇರಲಿದೆ.

Advertisement

ಬಾಣಸವಾಡಿಯಿಂದ ಪ್ರತಿ ಗುರುವಾರ ರಾತ್ರಿ 11:30ಕ್ಕೆ ಪ್ರಯಾಣ ಬೆಳೆಸುವ ರೈಲು ಶುಕ್ರವಾರ ಬೆಳಗ್ಗೆ 6:35ಕ್ಕೆ ಸಂಬಲಪುರಕ್ಕೆ ಆಗಮಿಸಲಿದೆ. ರೈಲು ಒಟ್ಟು 18 ಕೋಚ್‌ ಹೊಂದಿರಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಕೆಲ ರೈಲು ಸಂಚಾರ ಕಡಿತ: ಈ ಮಧ್ಯೆ, ನೈಋತ್ಯ ರೈಲ್ವೆ ವ್ಯಾಪ್ತಿಯ ಮೈಸೂರು ಡಿವಿಜನ್‌ನ ಮೈಸೂರು ಯಾರ್ಡ್‌ನಲ್ಲಿ ವಾಷೆಬಲ್‌ ಎಪ್ರಾನ್‌ ದುರಸ್ತಿ ಕಾರ್ಯದ ನಿಮಿತ್ತ ಮಾ.30ರಿಂದ ಏ.30ರವರೆಗೆ ಕೆಲ ರೈಲುಗಳ ಸಂಚಾರ ಕಡಿತಗೊಳಿಸಲಾಗಿದೆ.

ಶಿವಮೊಗ್ಗ ಟೌನ್‌-ಮೈಸೂರು ಪ್ಯಾಸೆಂಜರ್‌ (56269) ರೈಲು ಬೆಳಗುಳ ನಿಲ್ದಾಣದವರೆಗೆ ಮಾತ್ರ ಚಲಿಸಲಿದೆ. ಮೈಸೂರು-ಅರಸಿಕೆರೆ ಪ್ಯಾಸೆಂಜರ್‌ (56268) ರೈಲು ಮೈಸೂರು ಬದಲಿಗೆ ಬೆಳಗುಳ ನಿಲ್ದಾಣದಿಂದ ಪ್ರಯಾಣ ಆರಂಭಿಸಲಿದೆ. ಚಾಮರಾಜನಗರ-ಮೈಸೂರು ಪ್ಯಾಸೆಂಜರ್‌ (56207) ರೈಲು ಅಶೋಕಪುರಂ ನಿಲ್ದಾಣದಲ್ಲಿ 40 ನಿಮಿಷ ನಿಲುಗಡೆಗೊಳ್ಳಲಿದೆ.

ಅರಸಿಕೆರೆ-ಮೈಸೂರು ಪ್ಯಾಸೆಂಜರ್‌ (56265) ರೈಲು ಬೆಳಗುಳ ನಿಲ್ದಾಣದವರೆಗೆ ಮಾತ್ರ ಚಲಿಸಲಿದೆ. ಮೈಸೂರು-ಬೆಂಗಳೂರು ನಗರ ಪ್ಯಾಸೆಂಜರ್‌ (56263) ರೈಲು 60 ನಿಮಿಷ ವಿಳಂಬವಾಗಿ ಮೈಸೂರಿನಿಂದ ಪ್ರಯಾಣ ಬೆಳೆಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next