Advertisement

ಬರುವ ವರ್ಷ ಶ್ರೀಧರ ಸ್ವಾಮಿಗಳ ವಿಶೇಷ 50ನೇ ಆರಾಧನೆ

07:09 PM Apr 18, 2022 | Suhan S |

ಸಾಗರ: ಮುಂದಿನ ವರ್ಷ ಶ್ರೀಧರ ಸ್ವಾಮಿಗಳ 50ನೇ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಹವನ, ಧಾರ್ಮಿಕ ಕಾರ‍್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಶ್ರೀಧರ ಮಹಾಮಂಡಲದ ಕಾರ್ಯದರ್ಶಿ ಕೆ.ವಿ. ಶ್ರೀಧರರಾವ್ ಹೇಳಿದರು.

Advertisement

ತಾಲೂಕಿನ ವರದಪುರದ ಶ್ರೀಧರಾಶ್ರಮದಲ್ಲಿ ಸೋಮವಾರ ಶ್ರೀಧರಸ್ವಾಮಿಗಳ 49ನೇ ಆರಾಧನಾ ಮಹೋತ್ಸವದಲ್ಲಿ ನೂತನ ವೆಬ್‌ಸೈಟ್ ಲೋಕಾರ್ಪಣೆ ನಡೆದ ಸಂದರ್ಭದಲ್ಲಿ ಅವರು ಮಾತನಾಡಿ, ಶ್ರೀರಾಮ ನವಮಿ ದಿನದಿಂದ 8 ದಿನಗಳ ಕಾಲ ಧಾರ್ಮಿಕ ಆಚರಣೆ ಮುಂತಾದವುಗಳ ಜತೆಗೆ 50ನೇ ಆರಾಧನೆಯನ್ನು ವಿಶೇಷವಾಗಿ ನಡೆಸಲಾಗುವುದು. ಕಳೆದ 2 ವರ್ಷಗಳಲ್ಲಿ ಕೊರೊನಾ ಸಾಂಕ್ರಮಿಕದ ಕಾರಣದಿಂದಾಗಿ ಆಶ್ರಮದಲ್ಲಿನ ಧಾರ್ಮಿಕ ಕಾರ‍್ಯಕ್ರಮಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ನಿರ್ಬಂಧಿಸಲಾಗಿತ್ತು. ಹೊರ ರಾಜ್ಯಗಳಿಂದಲೂ ಭಕ್ತರು ಆಶ್ರಮಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಸರಕಾರದ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಭಕ್ತಸಮೂಹಕ್ಕೆ ಆಗಿರುವ ತೊಂದರೆಗೆ ಮಹಾಮಂಡಲ ವಿಷಾದಿಸುತ್ತದೆ ಎಂದರು.

ವೆಬ್‌ಸೈಟ್ ವಿನ್ಯಾಸಗೊಳಿಸಿದ ಶ್ರೀಧರಭಟ್ ಕೆಳದಿ, ಕೋಶಾಧ್ಯಕ್ಷ ಭೀಮರಾವ್, ಮಹಾಮಂಡಲದ ನಿರ್ದೇಶಕ ಎಂ.ಜಿ.ಕೃಷ್ಣಮೂರ್ತಿ ಮತ್ತಿತರರು, ಪಿ.ಆರ್.ಕೃಷ್ಣಮೂರ್ತಿ, ಬಿ.ಆರ್.ಗಣಪತಿ ಬಂದಗದ್ದೆ, ಪ್ರಧಾನ ಅರ್ಚಕ ರಾಮಭಟ್ಟ, ಮಧು ಮಾಲ್ವೆ, ಮಹಾರಾಷ್ಟ್ರ ಸೇರಿದಂತೆ ವಿವಿಧ ಕಡೆಗಳಲ್ಲಿನ ಭಕ್ತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next