Advertisement

ಮರಣ ದಂಡನೆ ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ

11:17 PM Sep 28, 2019 | mahesh |

ನವದೆಹಲಿ: ಗಲ್ಲು ಶಿಕ್ಷೆ ಮತ್ತು ತೆರಿಗೆ ವಿಚಾರಗಳ ಕುರಿತ ಪ್ರಕರಣಗಳ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ವಿಶೇಷ ನ್ಯಾಯಪೀಠಗಳನ್ನು ಶನಿವಾರ ರಚಿಸಿದೆ. ಮುಂದಿನ ತಿಂಗಳಿಂದ ಈ ಪೀಠ ಅಸ್ತಿತ್ವಕ್ಕೆ ಬರಲಿದೆ. ಮೂವರು ನ್ಯಾಯಮೂರ್ತಿಗಳು ಇರುವ ಒಂದು ಪೀಠವು ಗಲ್ಲು ಶಿಕ್ಷೆ ಕುರಿತ ಪ್ರಕರಣಗಳ ವಿಚಾರಣೆ ನಡೆಸಲಿದೆ.

Advertisement

ಇನ್ನು ತಲಾ ಎರಡು ನ್ಯಾಯಮೂರ್ತಿಗಳನ್ನು ಒಳಗೊಂಡಿರುವ ಎರಡು ನ್ಯಾಯಪೀಠವನ್ನು ರಚಿಸಲಾಗುತ್ತಿದ್ದು, ಇದು ತೆರಿಗೆ ಕುರಿತ ಕೇಸ್‌ಗಳ ವಿಚಾರಣೆಗಳನ್ನು ನಡೆಸಲಿದೆ. ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸ ಲಾಗಿದ್ದು, ಸೆ. 23 ರಂದು ಅವರು ಅಧಿಕಾರ ಸ್ವೀಕರಿಸಿದ್ದಾರೆ. ಇದರಿಂದಾಗಿ ಸುಪ್ರೀಂಕೋರ್ಟ್‌ನಲ್ಲಿ ಈಗ 34 ನ್ಯಾಯ ಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ, ಏಳು ವರ್ಷಗಳೊಳಗಿನ ಜೈಲು ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆಗೆ ಏಕಸದಸ್ಯ ನ್ಯಾಯ ಪೀಠವನ್ನು ರಚಿಸಲೂ ಸುಪ್ರೀಂಕೋರ್ಟ್‌ ಕೆಲವೇ ದಿನಗಳ ಹಿಂದೆ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next