Advertisement

ಮಾತಾ- ಪಿತೃ ವಂದನೆ : ಮರಳು ಶಿಲ್ಪ ಕಲಾಕೃತಿ ಪ್ರದರ್ಶನ

09:25 PM Jan 01, 2019 | Karthik A |

ಕುಂದಾಪುರ: ಬಾಳೆಕುದ್ರು ಹಂಗಾರಕಟ್ಟೆಯ ಶ್ರೀ ನೃಸಿಂಹಾಶ್ರಮ ಶ್ರೀಗಳ ಅನುಗ್ರಹದೊಂದಿಗೆ ನಡೆಯುತ್ತಿರುವ ಮಾತಾ- ಪಿತೃ ವಂದನೆ ಅಭಿಯಾನದ ಅಂಗವಾಗಿ ಕೋಟೇಶ್ವರದ ಬೀಚ್‌ನಲ್ಲಿ ಉಡುಪಿಯ ಸ್ಯಾಂಡ್‌ ಥಿಂ ತಂಡ, ರೋಟರಿ ಕ್ಲಬ್‌ ಕುಂದಾಪುರದ ಆಶ್ರಯದಲ್ಲಿ ಮರಳು ಶಿಲ್ಪ ಕಲಾವಿದ ಹರೀಶ್‌ ಸಾಗಾ ನೇತೃತ್ವದಲ್ಲಿ ಮರಳು ಶಿಲ್ಪ ಕಲಾಕೃತಿ ಪ್ರದರ್ಶನ ನಡೆಯಿತು.

Advertisement

ಕುಂದಾಪುರ ರೋಟರಿ ಕ್ಲಬ್‌ ಅಧ್ಯಕ್ಷ ಶೇಡಿಮನೆ ಗೋಪಾಲ ಶೆಟ್ಟಿ ಮಾತನಾಡಿದರು. ರೋಟರಿ ಕ್ಲಬ್‌ ಕಾರ್ಯದರ್ಶಿ ಪ್ರಕಾಶ್ಚಂದ್ರ ಶೆಟ್ಟಿ, ಪೂರ್ವಾಧ್ಯಕ್ಷ ಗಣೇಶ್‌ ಐತಾಳ್‌, ಸದಸ್ಯರಾದ ಸಾಲಗದ್ದೆ ಶಶಿಧರ ಶೆಟ್ಟಿ, ಕುಂದಾಪುರ ಆ್ಯನ್ಸ್‌ ಕ್ಲಬ್‌ನ ರಜನಿ ಗೋಪಾಲ ಶೆಟ್ಟಿ, ಕುಂದಾಪುರ  ಸೌಹಾರ್ದ ಕೋ ಆಪರೇಟಿವ್‌ನ ನಿರ್ದೇಶಕ ರಾಜೇಶ್‌ ದೈವಜ್ಞ, ಸಾಲಿಗ್ರಾಮದ ಶಿವಯೋಗ ಫೋರಂನ ಅಧ್ಯಕ್ಷ ಪ್ರಶಾಂತ್‌ ದೈವಜ್ಞ, ಕೋಣಿಯ ಮಾತಾ ಮೊಂಟೆಸೊÕàರಿ ಶಾಲೆ ಪ್ರಾಂಶುಪಾಲೆ ಭಾರತಿ ಪ್ರಕಾಶ್ಚಂದ್ರ ಶೆಟ್ಟಿ, ಬಾಂಡ್ಯ ಎಜುಕೇಶನಲ್‌ ಟ್ರಸ್ಟ್‌ನ ಆಡಳಿತಾಧಿಕಾರಿ ಜಯಂತ್‌ ಶೆಟ್ಟಿ, ಹೆಬ್ರಿ ಅಮೃತ ಭಾರತಿ ಪಿಯು ಕಾಲೇಜಿನ ಉಪನ್ಯಾಸಕಿ ಕೋಣಿ ಮಮತಾ ಪೂಜಾರಿ ಮತ್ತಿತರರಿದ್ದರು. ಅಭಿಯಾನದ ಸಂಚಾಲಕ ಸಂತೋಷ್‌ ಕೋಣಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next