Advertisement

Special link train; ಮಂಗಳೂರು – ಮಡಗಾಂವ್‌ ನಡುವೆ ವಿಶೇಷ ಲಿಂಕ್‌ ರೈಲು

01:50 AM Jul 21, 2024 | Team Udayavani |

ಕುಂದಾಪುರ: ಭಾರೀ ಮಳೆ ಯಿಂದಾಗಿ ಘಾಟಿ ಪ್ರದೇಶಗಳಲ್ಲಿ ರಸ್ತೆ ಸಂಚಾರ ದುಸ್ತರಗೊಂಡಿರುವುದರಿಂದ ರಾಜಧಾನಿ ಬೆಂಗ ಳೂರು ಹಾಗೂ ಕರಾವಳಿ ಭಾಗದ ಜನರ ಅನುಕೂಲ ಕ್ಕಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಮನವಿಗೆ ಸ್ಪಂದಿಸಿರುವ ರೈಲ್ವೆ ಸಚಿವಾಲಯ ಬೆಂಗಳೂರಿನಿಂದ ಮಂಗಳೂರುವರೆಗೆ ಸಂಚರಿಸಲಿ ರುವ ರೈಲನ್ನು ಮಂಗಳೂರಿನಿಂದ ಮಡಗಾಂವ್‌ವರೆಗೆ ವಿಶೇಷ ಲಿಂಕ್‌ ರೈಲನ್ನಾಗಿ ವಿಸ್ತರಿಸಲು ವ್ಯವಸ್ಥೆ ಕಲ್ಪಿಸಿದೆ.
ಬೆಂಗಳೂರು – ಮಂಗಳೂರು ರೈಲಿಗೆ ಮಡ ಗಾಂವ್‌ – ಮಂಗಳೂರು ಜಂಕ್ಷನ್‌ ಮಧ್ಯೆ 3 ದಿನಗಳ ವಿಶೇಷ ಲಿಂಕ್‌ ರೈಲಿನ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಅಧ್ಯಕ್ಷ ಗಣೇಶ್‌ ಪುತ್ರನ್‌ ಅವರು ಸಂಸದರಿಗೆ ಸಮಸ್ಯೆ ಬಗ್ಗೆ ತಿಳಿಸಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಸಂಸದರು, ತತ್‌ಕ್ಷಣವೇ ರೈಲ್ವೇ ಖಾತೆ ರಾಜ್ಯ ಸಚಿವ ಸೋಮಣ್ಣನವರಿಗೆ ಲಿಂಕ್‌ ಸೇವೆಗಳ ಆರಂಭಕ್ಕೆ ತಿಳಿಸಿದರಲ್ಲದೆ, ಮಳೆಗಾಲದ ಸಮಸ್ಯೆ ಜಾಸ್ತಿ ಇರುವ ಅವಧಿಯಲ್ಲಿ ಬೆಂಗಳೂರು – ಕಾರವಾರ ಮಧ್ಯೆ ಪಡೀಲ್‌ ಬೈಪಾಸ್‌ ಮಾರ್ಗದಲ್ಲಿ ವಿಶೇಷ ರೈಲಿಗೆ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು – ಮಂಗಳೂರು ವಿಶೇಷ ರೈಲು ಬಂದ ಕೆಲವೇ ಹೊತ್ತಲ್ಲಿ ಈ ಲಿಂಕ್‌ ರೈಲು ಉಡುಪಿ- ಕುಂದಾಪುರ – ಕಾರವಾರ ಮಾರ್ಗವಾಗಿ ಗೋವಾ ಕಡೆಗೆ ತೆರಳಲಿದೆ. ಈ ಸೇವೆ ಮೂರು ದಿನಗಳ ಕಾಲ ಮುಂದುವರಿ ಯಲಿದ್ದು, ಪ್ರಯಾ ಣಿಕರಿಗೆ ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next