Advertisement

ಮುಂಬಯಿ ಬಂಟರಿಂದ ಎ.ಸದಾನಂದ ಶೆಟ್ಟಿ ವಿಶೇಷ ಗೌರವಾರ್ಪಣೆ

11:22 AM Sep 06, 2017 | Team Udayavani |

ಮುಂಬಯಿ: ಮೂಡಬಿದ್ರೆಯ ವಿದ್ಯಾನಗರಿಯ ನುಡಿಸಿರಿ ವೇದಿಕೆಯಲ್ಲಿ ಸೆ. 2ರಂದು ನಡೆದ ಶ್ರೀ ದೇವಿ ಎಜುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ, ಇಂಟರ್‌ನ್ಯಾಷನಲ್‌ ಬಂಟ್ಸ್‌ ವೆಲ್ಫೆàರ್‌ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ, ಪ್ರತಿಷ್ಠಿತ ಕ್ರೀಡಾ ಸಂಘಗಳ ಮಹಾಪೋಷಕ, ಸಮಾಜ ಸೇವಕ ಎ. ಸದಾನಂದ ಶೆಟ್ಟಿ ಅವರ 75ನೇ ಹುಟ್ಟುಹಬ್ಬದ ಸದಾಭಿನಂದನೆ ಅಭಿನಂದನಾ  ಸಮಾರಂಭದಲ್ಲಿ ಮುಂಬಯಿ ಬಂಟರಿಂದ ಎ. ಸದಾನಂದ ಶೆಟ್ಟಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.

Advertisement

ಈ ಸಂದರ್ಭದಲ್ಲಿ ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಮಾಜಿ ಉಪಾಧ್ಯಕ್ಷರಾದ ಬಿ. ವಿವೇಕ್‌ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ, ಹೊಟೇಲ್‌ ಉದ್ಯಮಿಗಳಾದ ಶಿವರಾಮ ಜಿ. ಶೆಟ್ಟಿ ಅಜೆಕಾರು, ಭಾಸ್ಕರ್‌ ಶೆಟ್ಟಿ ಸಿಬಿಡಿ, ಡಾ| ಮನೋಹರ ಹೆಗ್ಡೆ, ಕಲಾ ಸಂಘಟಕ ಕರ್ನೂರು ಮೋಹನ್‌ ರೈ, ಕಲಾಜಗತ್ತಿನ ರೂವಾರಿ ವಿಜಯಕುಮಾರ್‌ ಶೆಟ್ಟಿ ತೋನ್ಸೆ ಹಾಗೂ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ, ಬಂಟ್ಸ್‌ ಅಸೋಸಿಯೇಶನ್‌ ಪುಣೆ ಗೌರವ ಪ್ರಧಾನ ಕಾರ್ಯದರ್ಶಿ ನಗ್ರಿಗುತ್ತು ರೋಹಿತ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು, ಎ. ಸದಾನಂದ ಶೆಟ್ಟಿ ಅವರನ್ನು ವಿಶೇಷವಾಗಿ ಗೌರವಿಸಿ ಅಭಿನಂದಿಸಿ ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next