Advertisement

ಯುಗಾದಿ ಪ್ರಯುಕ್ತ ವಿಶೇಷ ಅಲಂಕಾರ

06:13 PM Apr 08, 2019 | Lakshmi GovindaRaju |

ಕೆಂಗೇರಿ: ಇಲ್ಲಿನ ಶ್ರೀ ವಿಶ್ವವಿದ್ಯಾ ಗಣಪತಿ ದೇವಾಲಯದ ಆವರಣದಲ್ಲಿರುವ “ಶ್ರೀ ಅರುಣಾಚಲೇಶ್ವರ ಸ್ವಾಮಿ’ಗೆ ಯುಗಾಗಿ ಅಂಗವಾಗಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

Advertisement

ಬೆಳಗ್ಗೆ 5 ಗಂಟೆಯಿಂದ ಪ್ರಾರಂಭವಾದ ಕಾರ್ಯಕ್ರಮ ಪಂಚಾಮೃತ ಅಬೀಷೇಕ, ರುದ್ರಾಬೀಷೇಕ, ವಿಭೂತಿ ಅಬೀಷೇಕ, ಪಂಚಮೇವಾಭಿಷೇಕ ನಡೆಸಲಾಯಿತು. ಸ್ವಾಮಿಗೆ ವಿಶೇಷ ಪುಷ್ಪಗಳಿಂದ ಅಲಂಕಾರ ಮಾಡಿ, ಶ್ರೀಸೂಕ್ತ, ಪುರುಷ ಸೂಕ್ತ, ಶಿವಾಷ್ಟೋತ್ತರಗಳ ಮೂಲೊಕ ಪೂಜೆ ನೆರವೇರಿಸಲಾಯಿತು. ನೂರಾರು ಭಕ್ತರು ಸ್ವಾಮಿಯ ದರ್ಶನ ಪಡೆದರು.

ಪ್ರಧಾನ ಅರ್ಚಕ ಅರುಣ್‌ಕುಮಾರ್‌, ದೇವಾಲಯ ಟ್ರಸ್ಟ್‌ ಅಧ್ಯಕ್ಷ ಸುರೇಶ್‌ ಮುನಿ, ಕಾರ್ಯದರ್ಶಿ ನಿರಂಜನ್‌, ಖಜಾಂಚಿ ಗಿರೀಶ್‌, ಗೌರವಾಧ್ಯಕ್ಷ ಜಿ. ಮುನಿರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next