Advertisement

ವಿಶೇಷ ಸಂಪರ್ಕ ಅಭಿಯಾನ

07:51 PM Apr 10, 2019 | Sriram |

ಮೂಲ್ಕಿ: ಪ್ರತಿಯೊಬ್ಬ ಮತದಾರರು ಜಾಗೃತರಾಗಿ ಬಿಜೆಪಿಗೆ ಮತ ಕೊಡುವಂತೆ ಬಿಜೆಪಿ ಮೂಲ್ಕಿ – ಮೂಡುಬಿದಿರೆ ಮಂಡಲ ಅಧ್ಯಕ್ಷ ಈಶ್ವರ ಕಟೀಲ್‌ ಹೇಳಿದರು.

Advertisement

ಅವರು ಮೂಲ್ಕಿಯ ಕಾರ್ನಾಡು ಸದಾಶಿವ ರಾವ್‌ ನಗರದಲ್ಲಿ ಮೂಲ್ಕಿ ಮಹಾ ಶಕ್ತಿ ಕೇಂದ್ರದ ಆಶ್ರಯದಲ್ಲಿ ನಡೆದ ವಿಶೇಷ ಸಂಪರ್ಕ ಅಭಿಯಾನದಲ್ಲಿ ಮತ ಯಾಚನೆ ಮಾಡಿ ಮಾತನಾಡಿದರು.

ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೂಲ್ಕಿ ನಗರ ಪಂಚಾಯತ್‌ ಅಧ್ಯಕ್ಷ ಸುನೀಲ್‌ ಆಳ್ವ, ಸ್ಥಾಯೀ ಸಮಿತಿ ಅಧ್ಯಕ್ಷ ಶೈಲೇಶ್‌ ಕುಮಾರ್‌ ಹಾಗೂ ಪಕ್ಷದ ಮುಖಂಡರಾದ ವಿಠಲ ಎಂ.ಎನ್‌., ಚಂದ್ರಶೇಖರ ಆಚಾರ್‌, ನಗರ ಪಂಚಾಯತ್‌ ಮಾಜಿ ಸದಸ್ಯೆ ಶಾಂತಾ ಕಿರೋಡಿಯನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next