Advertisement

P-20: ಭಾರತದಲ್ಲಿ ನಡೆಯುವ ಜಿ20 ರಾಷ್ಟ್ರಗಳ ಸಂಸತ್‌ ಅಧ್ಯಕ್ಷರ ಸಭೆಗೆ ಕೆನಡಾ ಸ್ಪೀಕರ್‌ ಗೈರು

12:36 AM Oct 13, 2023 | Team Udayavani |

ಹೊಸದಿಲ್ಲಿ: ಭಾರತದಲ್ಲಿ ನಡೆಯುವ ಜಿ20 ರಾಷ್ಟ್ರಗಳ ಸಂಸತ್‌ ಸದನಗಳ ಅಧ್ಯಕ್ಷರ ಸಭೆ(ಪಿ20)ಯಲ್ಲಿ ಭಾಗವಹಿ ಸದೇ ಇರಲು ಕೆನಡಾ ಸಂಸತ್‌ನ ಸ್ಪೀಕರ್‌ ರೇಮಂಡ್‌ ಗ್ಯಾಗ್ನೆ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಖಾಲಿಸ್ಥಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಅನಂತರ ಕೆನಡಾ ಮತ್ತು ಭಾರತದ ನಡುವಿನ ಬಾಂಧವ್ಯ ಕೊಂಚ ಹಳಸಿದೆ. ಭಾರತದ ಪ್ರಯೋಜಿತ ಏಜೆಂಟರು ನಿಜ್ಜರ್‌ ಹತ್ಯೆ ಮಾಡಿದ್ದಾರೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡೊ ಆರೋಪಿಸಿದ್ದರು. ಆದರೆ ಇದಕ್ಕೆ ಯಾವುದೇ ಸಾಕ್ಷ್ಯಗಳನ್ನು ಇದುವರೆಗೂ ಕೆನಡಾ ಒದಗಿಸಿಲ್ಲ.

ಹೊಸದಿಲ್ಲಿಯ ಯಶೋಭೂಮಿಯ ಇಂಡಿಯಾ ಇಂಟರ್‌ನ್ಯಾಶನಲ್‌ ಕನ್ವೆನÒನ್‌ ಆ್ಯಂಡ್‌ ಎಕ್ಸ್‌ಪೋ ಸೆಂಟರ್‌ನಲ್ಲಿ ಅ.13-14ರಂದು ಪಿ20 ಸಮಾವೇಶ ನಡೆಯಲಿದೆ.
“ಎಲ್ಲ ಜಿ20 ರಾಷ್ಟ್ರಗಳ ಸಂಸತ್‌ ಸದನ ಗಳ ಅಧ್ಯಕ್ಷರಿಗೆ ನಾವು ಆಹ್ವಾನ ನೀಡಿ ದ್ದೇವೆ. ಕೆನಡಾ ಸಂಸತ್‌ ಸ್ಪೀಕರ್‌ಗೂ ಕೂಡ ಪಿ20 ಸಮಾವೇಶಕ್ಕೆ ಆಹ್ವಾನಿಸಿದ್ದೇವೆ’ ಎಂ ದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಕೆನಡಾ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್‌ ಮಾತುಕತೆ: ಕೆನಡಾ ಮತ್ತು ಭಾರತದ ನಡುವಿನ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವ ನಿಟ್ಟಿನಲ್ಲಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಇತ್ತೀಚೆಗೆ ಕೆನಡಾ ವಿದೇಶಾಂಗ ಸಚಿವ ಮೆಲೋನಿ ಜೋಲಿ ಅವರೊಂದಿಗೆ ಸಭೆ ನಡೆಸಿದ್ದರು ಎಂದು ವರದಿಗಳು ತಿಳಿಸಿವೆ. ಆದರೆ ಈ ಮಾಹಿತಿಯನ್ನು ವಿದೇಶಾಂಗ ಸಚಿ ವಾಲಯ ಖಚಿತಪಡಿಸಿಲ್ಲ. ಆದರೆ ಭಾರತ- ಕೆನಡಾ ಸಂಬಂಧವನ್ನು ಹಳಿಗೆ ತರಲು ಪ್ರಯತ್ನಗಳು ನಡೆದಿವೆ ಎಂದು ಅದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next