Advertisement

ಸ್ಪೀಕರ್‌ ನಡೆ ತೃಪ್ತಿ ಇಲ್ಲ: ಡಾ. ಉಮೇಶ ಜಾಧವ

11:15 PM Jul 21, 2019 | Team Udayavani |

ಕಲಬುರಗಿ: “ಸ್ಪೀಕರ್‌ ರಮೇಶಕುಮಾರ ಅವರ ನಡೆ ತೃಪ್ತಿ ತರುತ್ತಿಲ್ಲವಾದರೂ ಸೋಮವಾರ ಒಳ್ಳೆಯ ನಿರ್ಣಯ ಕೈಗೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ’ ಎಂದು ಸಂಸದ ಡಾ| ಉಮೇಶ ಜಾಧವ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲೇಬೇಕು. ಕಾಲಹರಣ ಬಿಡಬೇಕು. ನಾನು ಕೂಡಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ 50 ಕೋಟಿ ರೂ.ಗೆ ಮಾರಾಟವಾಗಿದ್ದೇವೆ ಎಂದು ಗುಲ್ಲು ಹಬ್ಬಿಸಿದ್ದರು. ಆದರೆ ಜನರು ತುಂಬಾ ಜಾಣರಿದ್ದಾರೆ. ಹೀಗಾಗಿ ನನ್ನನ್ನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದರು ಎಂದರು.

ಮುಂಬೈಗೆ ಹೋದವರು ಯಾರೂ ಹಣಕ್ಕಾಗಿ ಅಲ್ಲ, ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ ಹೋಗಿದ್ದಾರೆ. ಅತೃಪ್ತ ಶಾಸಕರನ್ನು ಭೇಟಿಯಾಗಿ ಮಾತನಾಡಿದ್ದೇನೆ. ತಮಗೆಲ್ಲರಿಗೂ ನ್ಯಾಯ ಸಿಗುತ್ತೇ ಅಂತ ಹೇಳಿದ್ದೇನೆ. ಅದಕ್ಕೆ ನಾನೇ ಉದಾಹರಣೆ ಎಂದು ತಿಳಿಸಿದ್ದೇನೆ. ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಮೂರು ಜನ ಸಚಿವರು ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಮುಂದೆ ಯಾವ ಪಕ್ಷ ಸರ್ಕಾರ ರಚನೆ ಮಾಡುತ್ತದೆ ಎಂಬುದು ಗೊತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next