Advertisement

ಸಚಿವ ತಮ್ಮಣ್ಣ ವಿರುದ್ಧ ಕಿಡಿ

10:49 PM Jun 08, 2019 | Team Udayavani |

ಬೆಂಗಳೂರು: ಜನರು ಅಧಿಕಾರ ನೀಡಿರುವುದು ದರ್ಪ ತೋರಿಸುವುದಕ್ಕಲ್ಲ ಎಂಬುದನ್ನು ಸಚಿವ ಡಿ.ಸಿ.ತಮ್ಮಣ್ಣ ಅವರು ಅರ್ಥಮಾಡಿಕೊಳ್ಳಬೇಕು ಎಂದು ಸಂಸದೆ ಸುಮಲತಾ ವಾಗ್ಧಾಳಿ ನಡೆಸಿದರು.

Advertisement

ಸಚಿವ ಡಿ.ಸಿ.ತಮ್ಮಣ್ಣ ಅವರ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ, ಚುನಾವಣೆಯಲ್ಲಿ ಜನ ಓಟು ಹಾಕಿ ಗೆಲ್ಲಿಸಿದ ಮೇಲೆ ಅವರಿಗಾಗಿ ಕೆಲಸ ಮಾಡದೇ ಇದ್ದರೆ ಎಂತಹ ಸ್ಥಾನದಲ್ಲಿದ್ದರೂ ಅರ್ಥ ಇಲ್ಲ ಎಂದು ಕಟುವಾಗಿ ಹೇಳಿದರು.

ಜನರಿಗೆ ಸಹಾಯ ಮಾಡಲು ಸಾಧ್ಯವಾಗದೇ ಇದ್ದರೆ ರಾಜೀನಾಮೆ ನೀಡಿ ಎಂದು ಜನ ಕೇಳುತ್ತಾರೆ. ಸಚಿವ ಡಿ.ಸಿ.ತಮ್ಮಣ್ಣ ರಾಜೀನಾಮೆ ಕೊಡಬೇಕು ಎಂದು ನಾನು ಕೇಳಲ್ಲ, ಜನರೇ ಕೇಳುತ್ತಾರೆ. ಚುನಾವಣೆಯಲ್ಲಿ ಬೆಂಬಲಿಸದ ಕಾರಣಕ್ಕೆ ಜನರಿಗೆ ಕೆಲಸ ಮಾಡಿಕೊಡುವುದಿಲ್ಲ ಎನ್ನುವುದು ಜನಪ್ರತಿನಿಧಿಗಳು ಜನ ಸಾಮಾನ್ಯರಿಗೆ ಮಾಡುವ ದ್ರೋಹ ಎಂದು ಕಿಡಿಕಾರಿದರು.

ಇದೇ ಮೊದಲ ಬಾರಿಗೆ ದ್ವೇಷದ ರಾಜಕಾರಣವನ್ನು ನೋಡುತ್ತಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ ಕಾರಣಕ್ಕೆ ಕ್ಷೇತ್ರದ ಜನರ ಕೆಲಸ ಮಾಡಿಕೊಡುವುದಿಲ್ಲ ಎಂದು ಸಚಿವರು, ಶಾಸಕರು ಹೇಳುತ್ತಿರುವುದು ಸರಿಯಲ್ಲ. ಜನರು ಕೆಲಸ ಮಾಡಿಕೊಂಡುವಂತೆ ಜನಪ್ರತಿನಿಧಿಗಳಲ್ಲಿ ಕೇಳುವುದು ಸಹಜ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next