Advertisement

ಆಯೋಗದ ಬಗ್ಗೆ ಕಿಡಿ

01:00 AM Mar 05, 2019 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆ ದಿನಾಂಕಗಳನ್ನು ಘೋಷಿಸಲು ಚುನಾವಣಾ ಆಯೋಗ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಅಹ್ಮದ್‌ ಪಟೇಲ್‌ ಆರೋಪಿಸಿದ್ದಾರೆ. ನೀತಿ ಸಂಹಿತೆ ಜಾರಿಯಾದ ಅನಂತರ ಅಭಿವೃದ್ಧಿ ಕಾರ್ಯಕ್ರಮ ಗಳ ಉದ್ಘಾಟನೆ ಅಥವಾ ಶಂಕುಸ್ಥಾಪನೆ ನೆರವೇರಿಸಲು ಸಾಧ್ಯ ವಾಗುವುದಿಲ್ಲ. ಹೀಗಾಗಿ ಕೊನೆಯ ಕ್ಷಣದವರೆಗೂ ಪ್ರಧಾನಿ ಮೋದಿ ಸರಕಾರಿ ವೆಚ್ಚದಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರು ಅಭಿವೃದ್ಧಿ ಕಾರ್ಯಕ್ರಮ ಘೋಷಿಸಿ ಮುಗಿಸುವುದಕ್ಕೆ ಚುನಾವಣೆ ಆಯೋಗ ಕಾಯುತ್ತಿದೆಯೇ ಎಂದು ಟೀಕಿಸಿ ಪಟೇಲ್‌ ಟ್ವೀಟ್‌ ಮಾಡಿದ್ದಾರೆ. ರಾಜಕೀಯ ರ್ಯಾಲಿಗಳು, ಟಿವಿ, ರೇಡಿಯೋ ಹಾಗೂ ಮುದ್ರಣ ಜಾಹೀರಾತುಗಳನ್ನು ನೀಡುವ ಮೂಲಕ ರಾಜಕೀಯ ಪ್ರಚಾರವನ್ನು ಮೋದಿ ಮಾಡುತ್ತಿದ್ದಾರೆ.

Advertisement

ಕೊನೆಯ ಕ್ಷಣದ ವರೆಗೂ ಸರಕಾರಿ ಹಣ ಖರ್ಚು ಮಾಡಲು ಮೋದಿಗೆ ಆಯೋಗ ಅನುವು ಮಾಡಿಕೊಡುತ್ತಿರುವಂತಿದೆ ಎಂದು ಅವರು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next