Advertisement

ಚೆಕ್‌ ಪೋಸ್ಟ್‌ ಗೆ ಎಸ್ಪಿ ನಾಗೇಶ ಭೇಟಿ

03:12 PM Jan 13, 2022 | Team Udayavani |

ಔರಾದ: ತಾಲೂಕಿನ ವನಮಾರಪಳ್ಳಿ ಗ್ರಾಮದಲ್ಲಿನ ಚೆಕ್‌ ಪೋಸ್ಟ್‌ಗೆ ಬುಧವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌. ನಾಗೇಶ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ವನಮಾರಪಳ್ಳಿ ಗ್ರಾಮದಲ್ಲಿ ಚೆಕ್‌ ಪೋಸ್ಟ್‌ ನಿರ್ಮಿಸಿದ್ದು ಮಹಾರಾಷ್ಟ್ರದಿಂದ ಕರ್ನಾಟಕ ರಾಜ್ಯಕ್ಕೆ ಬರುವ ವಾಹನಗಳನ್ನು ಕಡ್ಡಾಯವಾಗಿ ನಿಲ್ಲಿಸಿ ಅದರಲ್ಲಿ ಪ್ರತಿಯೊಬ್ಬರಿಗೂ ತಪಾಷಣೆ ಮಾಡಿದ ಬಳಿಕವೇ ರಾಜ್ಯದೊಳಗೆ ಪ್ರವೇಶ ಮಾಡಲು ಅವಕಾಶ ನೀಡಿ. ಇಲ್ಲವಾದಲ್ಲಿ ಚೆಕ್‌ಪೋಸ್ಟ್‌ ಸಿಬ್ಬಂದಿಗಳ ವಿರುದ್ಧವೇ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದರು.

ಕಳೆದೆರಡು ವರ್ಷ ಔರಾದ ತಾಲೂಕು ಸೇರಿದಂತೆ ಬೀದರ ಜಿಲ್ಲೆಯಲ್ಲಿನ ಚೆಕ್‌ ಪೋಸ್ಟ್‌ ಸಿಬ್ಬಂದಿಗಳು ಕೋವಿಡ್‌ ಸಮಯದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅದರಂತೆ ಈ ಬಾರಿಯೂ ಉತ್ತಮ ಕೆಲಸ ಮಾಡುವುದರ ಜೊತೆಗೆ ರಾಜ್ಯದ ಜನರಿಗೆ ನೆರೆ ರಾಜ್ಯದಿಂದ ಸೋಂಕು ಬಾರದಂತೆ ನೋಡಿಕೊಳ್ಳುವ ಕೆಲಸ ನಮ್ಮದಾಗಿದೆ ಎಂದರು.

ಮೂರು ರಾಜ್ಯದ ಗಡಿಗೆ ಅಂಟಿಕೊಂಡಿರುವ ಔರಾದ ತಾಲೂಕು ಅಪಾಯದ ಅಂಚಿನಲ್ಲಿಯೇ ಇದೆ ಜನರಿಗೆ ಸರ್ಕಾರ ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಕೊರೊನಾ ವಾರಿಯರ್ಸ್‌ಗಳು ಜಾಗೃತಿ ಮೂಡಿಸುತ್ತಿದ್ದಾರೆ. ಕಳೆದ ವಾರದಂತೆ ಇನ್ನೂ ಮುಂದೆ ಸರ್ಕಾರದ ಹಾಗೂ ಇಲಾಖೆಯ ನಿಯಮದಂತೆ ಎಲ್ಲರೂ ಜಾಗೃತಿಯಿಂದ ಕೆಲಸ ಮಾಡೋಣಾ ಎಂದು ತಿಳಿಸಿದರು. ಸಿಪಿಐ ರವೀಂದ್ರನಾಥ, ಪಿಎಸ್‌ಐ ಮಂಜುಗೌಡ ಸೇರಿದಂತೆ ಇಲಾಖೆಯ ಸಿಬ್ಬಂದಿ ಮತ್ತು ಚೆಕ್‌ಪೋಸ್ಟ್‌ ಸಿಬ್ಬಂದಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next