Advertisement

ಆಜಂ ಖಾನ್‌ಗೆ ಚುನಾವಣಾ ಆಯೋಗದಿಂದ ಹೊಸ ಶೋಕಾಸ್‌ ನೊಟೀಸ್‌ ಜಾರಿ

12:47 PM Apr 18, 2019 | Team Udayavani |

ಲಕ್ನೋ : ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ಗೆ ಚುನಾವಣಾ ಆಯೋಗದಿಂದ ಹೊಸ ಶೋಕಾಸ್‌ ನೊಟೀಸ್‌ ಜಾರಿಯಾಗಿದೆ. ಇದಕ್ಕೆ ಅವರು 24 ತಾಸುಗಳ ಒಳಗೆ ಉತ್ತರಿಸಬೇಕೆಂದು ಅಪ್ಪಣೆಯಾಗಿದೆ.

Advertisement

ಉತ್ತರ ಪ್ರದೇಶದ ವಿವಿಧೆಡೆಗಳಲ್ಲಿ ಕಳೆದ ಕೆಲ ದಿನಗಳಲ್ಲಿ ಆಜಂ ಖಾನ್‌ ಅವರು ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮಾಡಿದ ಭಾಷಣದಲ್ಲಿ ಅತ್ಯಂತ ಅವಹೇಳನಕಾರಿ ಮತ್ತು ಉದ್ರೇಕಕಾರಿ ಭಾಷಣ ಮಾಡಿರುವುದೇ ಈ ಹೊಸ ಶೋಕಾಸ್‌ ನೊಟೀಸ್‌ ಗೆ ಕಾರಣವಾಗಿದೆ.

ಉತ್ತರ ಪ್ರದೇಶದ ರಾಮಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಸಿನಿಮಾ ನಟಿ, ಜಯಪ್ರದಾ ಎದುರು ಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಆಜಂ ಖಾನ್‌ ಅವರು ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಆಜಂ ಖಾನ್‌ ಅವರು ಭಾಷಣದಲ್ಲಿ ಒಂದೆಡೆ, ಫ್ಯಾಸಿಸ್ಟ್‌ ಗಳು ನನ್ನನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ಇನ್ನೊಂದು ಕಡೆ ಪ್ರಧಾನ ಮಂತ್ರಿಗಳು ಮುಸ್ಲಿಮರನ್ನು ಕೊಂದಿದ್ದಾರೆ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next