Advertisement

ಮತ್ತೊಂದು ವಿವಾದಾತ್ಮಕ ಹೇಳಿಕೆ;ಸೇನೆ ಬಗ್ಗೆ ಅಝಂ ಖಾನ್‌ ಹೇಳಿದ್ದೇನು?

02:39 PM Jun 28, 2017 | Team Udayavani |

ಲಕ್ನೋ: ಉತ್ತರ ಪ್ರದೇಶದ ಮಾಜಿ ಸಚಿವ, ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್‌ ಮತ್ತೂಂದು ವಿವಾದಾತ್ಮಕ ಹೇಳಿಕೆ ನೀಡಿ ವಿವಾದ ಹುಟ್ಟು ಹಾಕಿದ್ದು, ಈ ಬಾರಿ ಸೇನೆಯ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

Advertisement

ರಾಮಪುರ್‌ ಎಂಬಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಝಂ ಖಾನ್‌ ‘ಸೈನಿಕರು ಅತ್ಯಾಚಾರದಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಗಡಿಯಲ್ಲಿ ಮಹಿಳೆಯರ ದೇಹದ ಖಾಸಗಿ ಭಾಗಗಳನ್ನು ಕತ್ತರಿಸಿ ಹಾಕಿ ಕ್ರೌರ್ಯ ತೋರಿದ್ದಾರೆ. ಇದರ ವಿರುದ್ಧ ಮಹಿಳೆಯರು ದಂಗೆ ಎಂದಿದ್ದಾರೆ. ಹೀಗಾಗಿ ಯೋಧನ ಶಿರ ಕತ್ತರಿಸಿ ಹಾಕಿದ್ದಾರೆ.ಸೈನಿಕರಿಂದ ಹೀಗೆಲ್ಲಾ ನಡೆದರೆ ನಾವು ವಿಶ್ವಕ್ಕೆ ಮುಖ ತೋರಿಸುವುದು ಹೇಗೆ’ ಎಂದು ಪ್ರಶ್ನಿಸಿದ್ದಾರೆ. 

ಬಿಜೆಪಿ ಅಝಂ ಖಾನ್‌ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ಬಿಜೆಪಿ ವಕ್ತಾರ ಸಂದೀಪ್‌ ಪಾತ್ರ ಅವರು ಎಸ್‌ಪಿ ನಾಯಕ ಐಸಿಸ್‌ ಉಗ್ರರ ವಕ್ತಾರನಾಗುವುದು ಒಳಿತು ಎಂದು ತಿರುಗೇಟು ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next