Advertisement

ಬೆಂಬಲ ಬೆಲೆಯಡಿ ಸೋಯಾಬೀನ್‌ ಖರೀದಿಗೆ ತೀರ್ಮಾನ

06:00 AM Oct 28, 2018 | |

ಬೆಂಗಳೂರು: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಸೋಯಾಬೀನ್‌ ಖರೀದಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಹೆಸರು ಕಾಳು ಖರೀದಿಗೆ ಹೆಚ್ಚುವರಿ ಕಾಲಾವಕಾಶ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಿದೆ. ವಿಧಾನಸೌಧದಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ, ಸೋಯಾಬೀನ್‌ ಪ್ರತಿ ರೈತರಿಂದ ಗರಿಷ್ಠ ಹತ್ತು ಕ್ವಿಂಟಾಲ್‌ ಖರೀದಿಗೆ ನಿರ್ಧರಿಸಲಾಯಿತು. ಪ್ರತಿ ಕ್ವಿಂಟಾಲ್‌ಗೆ 3399 ರೂ. ಬೆಲೆ ನಿಗದಿಪಡಿಸಲಾಯಿತು. ಬೀದರ್‌, ಧಾರವಾಡ, ಕಲಬುರಗಿ, ಬೆಳಗಾವಿ ಜಿಲ್ಲೆಗಳಲ್ಲಿ 4.47ಲಕ್ಷ ಮೆಟ್ರಿಕ್‌ ಟನ್‌ ಸೋಯಾಬೀನ್‌ ಬೆಳೆಯಲಾಗಿದ್ದು, ಹತ್ತು ದಿನ ನೋಂದಣಿಗೆ ಅವಕಾಶ ನೀಡಿ ತಿಂಗಳ ಕಾಲ ಖರೀದಿಸಲಾಗುವುದು ಎಂದು ಸಚಿವ ಬಂಡೆಪ್ಪ ಕಾಶಂಪೂರ್‌ ತಿಳಿಸಿದ್ದಾರೆ.

Advertisement

ಹೆಸರುಕಾಳು ಖರೀದಿಸಲು 23,250 ಮೆಟ್ರಿಕ್‌ ಟನ್‌ ಪ್ರಮಾಣ ಹಾಗೂ 90 ದಿನಗಳ ಕಾಲಾವಕಾಶ ಕೇಂದ್ರ ಸರ್ಕಾರ ನೀಡಿತ್ತು. ಈಗಾಗಲೇ ಶೇ.90 ರಷ್ಟು ಖರೀದಿ ಮಾಡಲಾಗಿದ್ದು ಹೆಚ್ಚುವರಿ ಕಾಲಾವಕಾಶಕ್ಕಾಗಿ ದೆಹಲಿಗೆ ತೆರಳಿ ಮನವಿ ಮಾಡಲಾಗುವುದು ಹೇಳಿದರು. ಪ್ರತಿ ಕ್ವಿಂಟಾಲ್‌ ಹೆಸರುಕಾಳು 6,975 ರೂ.ನಂತೆ ರೈತರಿಗೆ ತಲಾ 4 ಕ್ವಿಂಟಾಲ್‌ ಖರೀದಿಗೆ ಅನುಮತಿ ನೀಡಲಾಗಿತ್ತು. ಅದರಂತೆ 58,890 ರೈತರಿಂದ 2,32,55,387 ಕ್ವಿಂಟಾಲ್‌ ಹೆಸರು ಕಾಳು 162.20 ಕೊಟಿ ರೂ. ಮೊತ್ತದಲ್ಲಿ ಖರೀದಿಸಲಾಗಿದೆ ಎಂದು ತಿಳಿಸಿದರು. ಪ್ರತಿ ಕ್ವಿಂಟಾಲ್‌ಗೆ 5300 ರೂ. ದರದಲ್ಲಿ 9075 ಮೆಟ್ರಿಕ್‌ ಟನ್‌ ಉದ್ದು ಖರೀದಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next