Advertisement

ಭಾರತ – ಪಾಕ್ ಕ್ರಿಕೆಟ್ ಸರಣಿ ಸಾಧ್ಯತೆ ಬಗ್ಗೆ ಸೌರವ್ ಹೇಳಿದ್ದೇನು ?

10:33 AM Oct 18, 2019 | Team Udayavani |

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಲು ಸಿದ್ದರಾಗಿರುವ ಮಾಜಿ ನಾಯಕ ಸೌರವ್ ಗಂಗೂಲಿ ಭಾರತ ಮತ್ತು ಪಾಕಿಸ್ಥಾನದ ನಡುವಿನ ಕ್ರಿಕೆಟ್ ಸಾಧ್ಯತೆಯ ಬಗ್ಗೆ ಹೇಳಿಕೆ ನೀಡಿದ್ದಾರೆ.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗಂಗೂಲಿ, ಭಾರತ – ಪಾಕಿಸ್ಥಾನಗಳ ನಡುವೆ ಕ್ರಿಕೆಟ್ ಸರಣಿ ನಡೆಯಬೇಕು ಅಥವಾ ಬೇಡ ಎನ್ನುವುದನ್ನು ನಾವು ನಿರ್ಧಾರ ಮಾಡುವುದಲ್ಲ. ಅದನ್ನು ದೇಶಗಳ ಪ್ರಧಾನ ಮಂತ್ರಿಯವರೇ ನಿರ್ಧರಿಸಬೇಕು. ನೀವು ಈ ಪ್ರಶ್ನೆಯನ್ನು ಮೋದಿ ಮತ್ತು ಇಮ್ರಾನ್ ಖಾನ್ ಬಳಿಯೇ ಕೇಳಬೇಕು ಎಂದರು.

ಉಭಯ ದೇಶಗಳ ನಡುವೆ ಕೊನೆಯದಾಗಿ ದ್ಚಿಪಕ್ಷೀಯ ಸರಣಿ ನಡೆದಿದ್ದು 2012ರಲ್ಲಿ. ನಂತರ ವಿಶ್ವಕಪ್, ಏಶ್ಯಾಕಪ್ ಮತ್ತು ಚಾಂಪಿಯನ್ ಟ್ರೋಫಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next