Advertisement

ಕಾರ್ತಿಕ್‌ ಬದಲು ರಾಹುಲ್‌ ಆಡಬೇಕು: ಗಂಗೂಲಿ

06:15 AM Sep 23, 2018 | Team Udayavani |

ಹೊಸದಿಲ್ಲಿ: 2019ರ ವಿಶ್ವಕಪ್‌ ಗಣನೆಗೆ ತೆಗೆದುಕೊಂಡು ಭಾರತದ ಏಕದಿನ ತಂಡದಲ್ಲಿ ದಿನೇಶ್‌ ಕಾರ್ತಿಕ್‌ ಬದಲು ಕೆ.ಎಲ್‌. ರಾಹುಲ್‌ ಅವರಿಗೆ ಸ್ಥಾನ ನೀಡಬೇಕೆಂದು ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಏಶ್ಯಕಪ್‌ನಲ್ಲಿ ರಾಹುಲ್‌ ತಂಡದಲ್ಲಿದ್ದರೂ ಅವರನ್ನು ಇಲ್ಲಿಯವ ರೆಗೆ ಒಂದೇ ಒಂದು ಪಂದ್ಯದಲ್ಲಿ ಆಡಿಸದಿರುವುದನ್ನು ಕಂಡು ಗಂಗೂಲಿ ಈ ಹೇಳಿಕೆ ನೀಡಿದ್ದಾರೆ.

Advertisement

“ಕಾರ್ತಿಕ್ ಗಿಂತ ರಾಹುಲ್‌ ಉತ್ತಮ ಆಟಗಾರ. ತಂಡದಲ್ಲಿ ರುವ ಎಲ್ಲ ಆಟಗಾರರ ಮೇಲೆ ನನಗೆ ಗೌರವವಿದೆ. ನನ್ನ ಪಕ್ರಾರ ಕಾರ್ತಿಕ್ ಅವರ ಸ್ಥಾನಕ್ಕೆ ರಾಹುಲ್‌ ಅವರನ್ನು ಆಯ್ಕೆ ಮಾಡಬೇಕು. ಇಂಗ್ಲೆಂಡ್‌ ಪ್ರವಾಸದ ವೇಳೆ ಕಾರ್ತಿಕ್‌ ಪ್ರದ ರ್ಶನ ಯಾವ ರೀತಿಯಿತ್ತು ಎಂಬುದು ಎಲ್ಲರೂ ಗಮನಿಸಿದ್ದಾ ರೆ. ವಿಶ್ವ ಕಪ್‌ಗೆ ತಂಡವನ್ನು ರೂಪಿಸಬೇಕಾದರೆ ಕಾರ್ತಿಕ್‌ ಅವರಿಗಿಂತ ಮೊದಲು ರಾಹುಲ್‌, ರಿಷಬ್‌ ಪಂತ್‌ ತಂಡದಲ್ಲಿರ ಬೇಕು’ ಎಂದು ಗಂಗೂಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next