Advertisement

ಹಾಲಗಳಲೆ ಗ್ರಾಮದಲ್ಲಿ ಸರಳ ವಿವಾಹ

06:14 PM Apr 22, 2020 | Naveen |

ಸೊರಬ:ಕೋವಿಡ್  ನಿಯಂತ್ರಣಕ್ಕೆ ಸರ್ಕಾರ ಲಾಕ್‌ ಡೌನ್‌ ವಿಧಿಸಿದ್ದರಿಂದ ಸಾಮಾಜಿಕ ಅಂತರದೊಂದಿಗೆ ಎಚ್‌. ಎಸ್‌. ಶಿವರಾಜ್‌ ಹಾಗೂ ಶೀಲಾ (ಸೌಜನ್ಯ) ಅವರ ನಡುವೆ ಸರಳ ವಿವಾಹವು ತಾಲೂಕಿನ ಹಾಲಗಳಲೆ ಗ್ರಾಮದಲ್ಲಿ ನಡೆಯಿತು.

Advertisement

ಗ್ರಾಮದ ಸೀತಾರಾಮಪ್ಪ ಮಲ್ಲೇರ್‌ ಮತ್ತು ದೇವಮ್ಮ ದಂಪತಿ ಪುತ್ರ ಎಚ್‌. ಎಸ್‌. ಶಿವರಾಜ್‌ ಹಾಗೂ ಸೊರಬ ಪಟ್ಟಣದ ರಾಘವೇಂದ್ರ ಬಡಾವಣೆಯ
ಹುಣಸೇಕಟ್ಟೆ ರೇವಣಪ್ಪ ಮತ್ತು ಸರೋಜ ದಂಪತಿಯ ಪುತ್ರಿ ಶೀಲಾ (ಸೌಜನ್ಯ) ಅವರ ವಿವಾಹನ್ನು ಲಾಕ್‌ ಡೌನ್‌ ಮುಗಿದ ಮೇಲೆ ಏ.15ಕ್ಕೆ ಅದ್ಧೂರಿಯಾಗಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಲಾಕ್‌ ಡೌನ್‌ ಮುಂದುವರಿಸಿದ್ದರಿಂದ ಮದುವೆ ನಡೆಸುವುದು ಹೇಗೆ ಎಂದು ಕುಟುಂಬಸ್ಥರು ಚಿಂತನೆ ನಡೆಸಿ ನಂತರ ಸರಳ ಮದುವೆಯ ಸೂತ್ರ ಹೆಣೆದರು.

ಬೆಳಗ್ಗೆ 11 ರಿಂದ 12ಕ್ಕೆ ನಡೆಯುವ ವಿವಾಹವನ್ನು ಸಾಮಾಜಿಕ ಅಂತರ ಹಾಗೂ ಮುಂಜಾಗ್ರತೆಯಿಂದ ಬೆಳಗ್ಗೆ 10 ಗಂಟೆ ಒಳಗಾಗಿ ವಿವಾಹ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next