Advertisement

ಸೊರಬ: ಬಾವಿಗೆ ಬಿದ್ದ ಎಮ್ಮೆಯ ರಕ್ಷಣೆ

11:25 AM Jul 03, 2022 | Shwetha M |

ಸೊರಬ: ಮೇಯಲು ಹೋಗಿದ್ದ ಎಮ್ಮೆಆಕಸ್ಮಿಕವಾಗಿ ಪಾಳುಬಾವಿಗೆ ಬಿದ್ದ ಘಟನೆ ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

Advertisement

ಕೆರೆಹಳ್ಳಿ ಗ್ರಾಮದ ಗಜೇಂದ್ರಗೌಡ ಎಂಬುವವರಿಗೆ ಸೇರಿದ ಎಮ್ಮೆ ಮೇಯಲು ತೆರಳಿದಾಗ ಆಕಸ್ಮಿಕವಾಗಿ ಗ್ರಾಮದ ಅರಣ್ಯ‌ಪ್ರದೇಶದ ಸುಮಾರು 35 ಅಡಿ ಆಳದ‌‌ ಪಾಳು ಬಾವಿಗೆ ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಎಮ್ಮೆಯನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ.

ಇದನ್ನೂ ಓದಿ:‘ನನಗೆ ತೀರ್ಪು ಇಷ್ಟವಾಗದಿದ್ದರೂ…’: ಸುಪ್ರೀಂ ಆದೇಶದ ಬಗ್ಗೆ ಕಾನೂನು ಸಚಿವರ ಪ್ರತಿಕ್ರಿಯೆ

ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಕೆ. ಮಹಾಬಲೇಶ್ವರ, ಸಿಬ್ಬಂದಿ ಮಹೇಶ್ ಮಡಿವಾಳ, ಪ್ರಸನ್ನಕುಮಾರ್, ಬಿ.ವಿ. ಮಂಜುನಾಥ್, ಗಿರೀಶ್, ಗೃಹರಕ್ಷಕ ದಳದ ಬಿ.ಎನ್. ಗಣಪತಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next