Advertisement

ರೈತ ಅನುವುಗಾರರ ಮುಂದುವರಿಸಿ

01:35 PM Jun 11, 2020 | Naveen |

ಸೊರಬ: ಕೃಷಿ ಇಲಾಖೆಯಲ್ಲಿನ ರೈತ ಅನುವುಗಾರ ಸಿಬ್ಬಂದಿಯನ್ನು ಮುಂದಿನ ಆರ್ಥಿಕ ವರ್ಷದ ಅವಧಿಗೂ ಮುಂದುವರೆಸುವಂತೆ ಒತ್ತಾಯಿಸಿ ರೈತ ಅನುವುಗಾರರ ಸಂಘದಿಂದ ತಾಲೂಕು ಕಚೇರಿಯಲ್ಲಿ ಶಿರಸ್ತೇದಾರ್‌ ಚನ್ನಕೇಶವ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಕೃಷಿ ಇಲಾಖೆಯಲ್ಲಿನ ರೈತ ಅನುವುಗಾರರ ಸೇವೆಯನ್ನು 2020-21ನೇ ಸಾಲಿನಲ್ಲಿ ಇಲಾಖೆಯ ಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಮುಂದುವರೆಸಬೇಕು. ಮುಂಗಾರು ಬಿತ್ತನೆ ಬಗ್ಗೆ ಹಾಗೂ ಇತರೆ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ರೈತ ಅನುವುಗಾರರನ್ನು ಬಳಸಿಕೊಳ್ಳಲಾಗುತ್ತಿದೆ. ಕೋವಿಡ್‌-19 ಪರಿಸ್ಥಿತಿಯಲ್ಲಿ ರೈತ ಅನುವುಗಾರರನ್ನು ಸೇವೆಯಲ್ಲಿ ಮುಂದುವರೆಸುವ ಜೊತೆಗೆ ಗೌರವಧನವನ್ನು 10 ಸಾವಿರ ರೂ., ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ರೈತ ಅನುವುಗಾರರ ಸಂಘದ ಜಿಲ್ಲಾಧ್ಯಕ್ಷ ಎಂ. ಸೋಮಪ್ಪ, ತಾಲೂಕು ಉಪಾಧ್ಯಕ್ಷ ಗಣಪತಿ, ಮಂಜುನಾಥ, ಶಿವಲಿಂಗಸ್ವಾಮಿ, ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next