Advertisement

ಸೂರ್ಗೋಳಿ ಶಾಲೆ : ಊರವರಿಂದ ತರಕಾರಿ ತೋಟ ನಿರ್ಮಾಣ

11:17 PM Jul 21, 2019 | Team Udayavani |

ಕುಂದಾಪುರ: ಸೂರ್ಗೋಳಿ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ರವಿವಾರ ಎಸ್‌.ಡಿ.ಎಂ.ಸಿ. ಮತ್ತು ಪೋಷಕರ ಪರಿಷತ್ತು, ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳ ಸಹಕಾರದಲ್ಲಿ ನಮ್ಮ ಶಾಲೆ ನಮ್ಮ ತೋಟ ಯೋಜನೆಯಲ್ಲಿ ನೂತನ ತರಕಾರಿ ತೋಟ ನಿರ್ಮಾಣ ಮಾಡಲಾಯಿತು.

Advertisement

ಸುಮಾರು 5 ಸೆಂಟ್ಸ್‌ ಸ್ಥಳವನ್ನು ಉಳುಮೆ ಮಾಡಿ ಜೈವಿಕ ಬೇಲಿ ರಚಿಸಲಾಯಿತು. ಬದನೆ, ಬೆಂಡೆ, ಹೀರೆ, ಸುವರ್ಣ, ಸೋರೆ ಗಿಡಗಳನ್ನು ನೆಡಲಾಯಿತು. ಪೋಷಕರು ಸ್ವಯಂಸೇವಕರಾಗಿ ತೋಟವನ್ನು ನಿರ್ಮಿಸಿದರು.ಕುಂದಾಪುರ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ. ಸಂಜೀವ ನಾಯ್ಕ ಗಿಡ ನೀಡುವುದರ ಮೂಲಕ ಚಾಲನೆ ನೀಡಲಾಯಿತು.

ತಾ.ಪಂ. ಸದಸ್ಯ ಚಂದ್ರಶೇಖರ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್‌ ಶೆಟ್ಟಿ, ರಮೇಶ್‌ ಹಾಲಂಬಿ, ನಾಗರಾಜ್‌ ನಕ್ಕತ್ತಾಯ, ಪ್ರಕಾಶ್‌ ಪೂಜಾರಿ ಉಪಸ್ಥಿತರಿದ್ದರು.
ಪ್ರಕಾಶ್‌ ಅಲ್ಸೆ ಬೇಲಿ ಸಾಮಗ್ರಿಗಳನ್ನು, ಶೇಖರ್‌ ನಾಯ್ಕ ಸೆಟ್ಟೊಳ್ಳಿ ಪೈಪ್‌ ಲೈನ್‌ ಕೊಡುಗೆ, ಎಸ್‌ಡಿಎಂಸಿ ಅಧ್ಯಕ್ಷ ಬಾಬಣ್ಣ ಸೂರ್ಗೋಳಿ ಮತ್ತು ಸೂರ್ಯ ನಾಯ್ಕ ಸಾಗಾಟ ವೆಚ್ಚ, ಚಂದ್ರ ಶೇಖರ ನಾಯ್ಕ ಗೊಬ್ಬರವನ್ನು ಕೊಡುಗೆಯಾಗಿ ನೀಡಿದರು.

ಪೋಷಕರಾದ ಕೃಷ್ಣ ನಾಯ್ಕ, ಸದಾಶಿವ, ಚಂದ್ರ ನಾಯ್ಕ, ನಾರಾಯಣ ನಾಯ್ಕ, ಸತೀಶ್‌, ಬಾಬಣ್ಣ ನಾಯ್ಕ, ಕೃಷ್ಣ ನಾಯ್ಕ, ಮೋಹನ್‌ ನಾಯ್ಕ, ವೆಂಕಟೇಶ್‌ ನಾಯ್ಕ, ಲಕ್ಷ್ಮಣ ನಾಯ್ಕ, ಸಂಜೀವ ನಾಯ್ಕ, ಪುಟ್ಟಯ್ಯ ನಾಯ್ಕ, ಸುರೇಶ್‌ ನಾಯ್ಕ ಮತ್ತಿತರರು ಭಾಗಿಯಾದರು.

ಶಿಕ್ಷಕರಾದ ದೇವ ನಾಯ್ಕ, ಶ್ರೀನಿವಾಸ್‌, ನಾಗರತ್ನ, ವನಿತಾ, ಆಶಾ ಸಹಕರಿಸಿದರು. ಮುಖ್ಯ ಶಿಕ್ಷಕ ಸದಾನಂದ ನಾಯಕ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next