Advertisement

ತುಲಾಭಾರ ವೇಳೆ ಸೋದೆ ಶ್ರೀಗಳ ತಲೆಗೆ ಗಾಯ

12:16 AM May 22, 2019 | mahesh |

ದಾವಣಗೆರೆ: ತುಲಾಭಾರ ಸಂದರ್ಭದಲ್ಲಿ ತಕ್ಕಡಿಯ ಕೊಂಡಿ ಕಳಚಿದ ಪರಿಣಾಮ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರ ತಲೆಗೆ ಸಣ್ಣ ಪ್ರಮಾಣದ ಗಾಯವಾಗಿದೆ. ನಗರದ ಗೌರಮ್ಮ ನರಹರಿ ಶೇs್ ಸಭಾಭವನದಲ್ಲಿ ಮಂಗಳವಾರ ಪಟ್ಟದೇವರ ಪೂಜೆ, ಸಾಮೂಹಿಕ ಪಾದಪೂಜೆ ನಂತರ ಶ್ರೀಗಳಿಗೆ ತುಲಾಭಾರ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕೂಡಲೇ ವೈದ್ಯರನ್ನು ಸ್ಥಳಕ್ಕೆ ಕರೆಸಿ, ಶ್ರೀಗಳಿಗೆ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಅನಿರೀಕ್ಷಿತ ಘಟನೆಯಿಂದ ಆತಂಕಕ್ಕೊಳಗಾದ ಭಕ್ತರು ನಂತರ ಅಕ್ಕಿ, ಬೆಲ್ಲ, ಹಣ್ಣುಗಳೊಂದಿಗೆ ಶ್ರೀಗಳ ತುಲಾಭಾರ ನೆರವೇರಿಸಿದರು. ಬಳಿಕ ಶ್ರೀಗಳು ಭಕ್ತರನ್ನು ಆಶೀರ್ವದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next