Advertisement
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರವೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ, ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಆಗುತ್ತಿರುವ ಬೆಳವಣಿಗೆ ಗಳನ್ನು ಅವರ ಗಮನಕ್ಕೆ ತರುತ್ತೇನೆ. ಈ ಎಲ್ಲಾ ವಿಷಯಗಳನ್ನು ಕೇಳುವುದು ಅಥವಾ ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು. ಆದರೆ, ಪಕ್ಷದ ಹಿರಿಯರ ಮುಂದೆ ನಿವೇದನೆ ಮಾಡಿಕೊಳ್ಳುವುದು ತಮ್ಮ ಕರ್ತವ್ಯ ಎಂದರು.
Related Articles
Advertisement
ಶೀಘ್ರವೇ ಎರಡೂ ಕ್ಷೇತ್ರಗಳಿಗೂ ಭೇಟಿ ನೀಡಿ ನಂಜುಂಡೇಶ್ವರ ಹಾಗೂ ಗೋಪಾಲ ಸ್ವಾಮಿ ಬಳಿಯೂ ಪಕ್ಷ ಉಳಿಸುವಂತೆ ನಿವೇದನೆ ಮಾಡಿ ಕೊಳ್ಳುತ್ತೇನೆ. ನಂಜನಗೂಡಿನ ನಂಜುಂಡೇಶ್ವರನ ಬಳಿ ಕಾಂಗ್ರೆಸ್ ಪಕ್ಷವನ್ನು ಉಳಿಸುವಂತೆ ಸಾಷ್ಟಾಂಗ ನಮಸ್ಕಾರ ಹಾಕಿ ಈಡುಗಾಯಿ ಒಡೆದು ಬರುತ್ತೇನೆ ಎಂದು ವಿಶ್ವನಾಥ್ ತಿಳಿಸಿದರು.
ಅಧ್ಯಕ್ಷರ ಬದಲಾವಣೆಗೆ ಕಿಡಿ: ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಟಿ.ಎಸ್.ರವಿಶಂಕರ್ ಅವರನ್ನು ದಿಢೀರ್ ಪದಚ್ಯುತಿಗೊಳಿಸಿ ಆರ್.ಮೂರ್ತಿ ಅವರನ್ನು ನೇಮಕ ಮಾಡಿರುವ ಕ್ರಮ ಸರಿಯಲ್ಲ. ನಂಜನಗೂಡು ಹಾಗೂ ಗುಂಡ್ಲುಪೇಟೆ ಚುನಾವಣೆ ಹೊಸ್ತಿಲಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷರ ಪದಚ್ಯುತಿಗೊಳಿಸಿ ಹೊಸಬರನ್ನು ನೇಮಿಸಿರುವುದು ಖಂಡನೀಯ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಕೇಳಿದರೆ ಮೈಸೂರು ಜಿಲ್ಲೆಯ ವಿಚಾರ ನನಗೆ ಕೇಳಬೇಡಿ ಎನ್ನುತ್ತಾರೆ.
ಇದನ್ನು ಗಮನಿಸಿದರೆ ಈ ಎಲ್ಲಾ ಬೆಳವಣಿಗೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅಣತಿಯಂತೆ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದ್ದು, ಇವರೇನು ಪಕ್ಷ ಕಟ್ಟುತ್ತಿದ್ದಾರೋ ಅಥವಾ ಒಡೆದು ಹಾಕುತ್ತಿದ್ದಾರೋ ಎಂದು ಪ್ರಶ್ನಿಸಿದ ಅವರು, ರವಿಶಂಕರ್ ತನ್ನೊಂದಿಗೆ ಓಡಾಡಿದರು ಎಂಬ ದ್ವೇಷದಿಂದ ಅವರನ್ನು ನಗರಾಧ್ಯಕ್ಷ ಸ್ಥಾನದಿಂದ ತೆಗೆದಿರಬಹುದು ಎಂದು ವಿಶ್ವನಾಥ್ ಕಿಡಿಕಾರಿದರು.