Advertisement

ಅನುದಾನ ಇಳಿಕೆಗೆ ಸೋನಿಯಾ ಗಾಂಧಿ ಆಕ್ಷೇಪ

11:54 PM Mar 31, 2022 | Team Udayavani |

ಹೊಸದಿಲ್ಲಿ: ನರೇಗಾ ಯೋಜನೆಯ ಕೂಲಿಗಾಗಿ ಕೇಂದ್ರ ಸರ್ಕಾರ ನೀಡಲಾಗುವ ಬಜೆಟ್‌ ಅನುದಾನದಲ್ಲಿ ಕಡಿತ ಮಾಡಿರುವುದಕ್ಕೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಶೂನ್ಯವೇಳೆ­ಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು, ಅನುದಾನ ಕೊರತೆಯಿಂದಾಗಿ ಈಗಾಗಲೇ ಕೆಲವು ರಾಜ್ಯಗಳಲ್ಲಿ ಸುಮಾರು 5 ಸಾವಿರ ಕೋಟಿ ರೂ. ಕೂಲಿಯನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಅನುದಾನ ಕಡಿತಗೊಳಿಸಿರುವುದು ಸರಿಯಲ್ಲ” ಎಂದರು.

ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವರಾದ ಗಿರಿರಾಜ್‌ ಸಿಂಗ್‌ ಹಾಗೂ ಅನುರಾಗ್‌ ಠಾಕೂರ್‌, “ಈ ಆರೋಪ ಸತ್ಯಕ್ಕೆ ದೂರವಾದದ್ದು. 2013-14ರಲ್ಲಿ ನರೇಗಾಗೆ 33 ಸಾವಿರ ಕೋಟಿ ರೂ. ಮೀಸಲಿ­ಡಲಾಗಿತ್ತು. ಆದರೆ, ಈಗ ಅದು 1.12 ಲಕ್ಷ ಕೋಟಿ ರೂ.ಗೆ ತಲುಪಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next