Advertisement

Air Pollution: ಹೆಚ್ಚಿದ ವಾಯುಮಾಲಿನ್ಯ… ದೆಹಲಿಯಿಂದ ಜೈಪುರಕ್ಕೆ ತೆರಳಿದ ಸೋನಿಯಾ ಗಾಂಧಿ

09:02 AM Nov 15, 2023 | Team Udayavani |

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯಡಾ ಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಅದೂ ಅಲ್ಲದೆ ದೀಪಾವಳಿ ಹಬ್ಬದ ಬಳಿಕ ದೆಹಲಿಯ ವಾತಾವರಣದಲ್ಲಿ ಮಾಲಿನ್ಯತೆ ಮತ್ತಷ್ಟು ಹೆಚ್ಚಾಗತೊಡಗಿದೆ ಪರಿಣಾಮ ಈಗಾಗಲೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆರೋಗ್ಯದ ದೃಷ್ಟಿಯಿಂದ ದೆಹಲಿಯಿಂದ ಜೈಪುರಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ವಾಯುಮಾಲಿನ್ಯದಿಂದ ಹದಗೆಟ್ಟ ದೆಹಲಿಯ ವಾತಾವರಣ ಜನಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎನ್ನಲಾಗಿದೆ ಪರಿಣಾಮ ಈ ಬಾರಿ ದೀಪಾವಳಿಗೆ ದೆಹಲಿಯಲ್ಲಿ ಪಟಾಕಿ ನಿಷೇಧ ಹೇರಲಾಗಿತ್ತು ಈಗಾಗಲೇ ವಾಯುಮಾಲಿನ್ಯದಿಂದ ಆವೃತವಾಗಿರುವ ದೆಹಲಿಗೆ ದೀಪಾವಳಿಯ ಸಮಯದಲ್ಲಿ ಮತ್ತಷ್ಟು ವಾತಾವರಣ ಕಲುಷಿತಗೊಳ್ಳುವ ನಿಟ್ಟಿನಲ್ಲಿ ಪಟಾಕಿ ನಿಷೇಧ ಹೇರಲಾಗಿತ್ತು.

ಈಗಾಗಲೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಅವರು ತಮ್ಮ ಆರೋಗ್ಯದ ಹಿತ ದೃಷ್ಟಿಯಿಂದ ವೈದ್ಯರು ಹಾಗೂ ಕುಟುಂಬದ ಸದಸ್ಯರ ಸಲಹೆಯ ಮೇರೆಗೆ ಸ್ವಲ್ಪ ದಿನದ ಮಟ್ಟಿಗೆ ದೆಹಲಿಯಿಂದ ಹೊರಗೆ ಉಳಿಯಲು ಬಯಸಿದ್ದಾರೆ ಅದರಂತೆ ಸೋನಿಯಾ ಗಾಂಧಿ ಜೈಪುರಕ್ಕೆ ತೆರಳಿದ್ದಾರೆ, ವಾಯುಮಾಲಿನ್ಯ ತಿಳಿಯಾದ ಬಳಿಕ ದೆಹಲಿಗೆ ಹಿಂತಿರುಗಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: India vs New Zealand ಸೆಮಿಫೈನಲ್‌ ಪಂದ್ಯ ವೀಕ್ಷಿಸಲು ಮುಂಬಯಿಗೆ ಬಂದಿಳಿದ ಸೂಪರ್‌ ಸ್ಟಾರ್

Advertisement

Udayavani is now on Telegram. Click here to join our channel and stay updated with the latest news.

Next