Advertisement

ಮಹದಾಯಿ ಬೆಂಕಿ ಹಚ್ಚಿದ್ದೇ ಸೋನಿಯಾ ಗಾಂಧಿ;ಬಿಎಸ್‌ವೈ ಕಿಡಿ 

12:11 PM Feb 27, 2018 | Team Udayavani |

ಬೀದರ್‌: ‘ಮಹದಾಯಿ ವಿಚಾರದಲ್ಲಿ ಬೆಂಕಿ ಹಚ್ಚಿದ್ದೇ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್‌’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಂಗಳವಾರ ಕಿಡಿ ಕಾರಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ರಾಹುಲ್‌ ಗಾಂಧಿ ಅವರ ರಾಜ್ಯದಲ್ಲಿ ಮಹದಾಯಿ ವಿಚಾರದಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಅವರು ಆ ಬಗ್ಗೆ ಮಾತನಾಡಲಿ. ಟ್ರಬ್ಯೂನಲ್‌ ರಚನೆ ಮಾಡಿದ್ದು ಕಾಂಗ್ರೆಸ್‌ ಪಕ್ಷ, ಸುಪ್ರೀಂ ಮೆಟ್ಟಿಲೇರಿದ್ದೂ ಅವರೇ.ಸಮಸ್ಯೆಗೆ ಕಾಂಗ್ರೆಸ್‌ ಪಕ್ಷವೇ ಕಾರಣ’  ಎಂದು ಕಿಡಿ ಕಾರಿದರು. 

‘ನಾವು ಅಧಿಕಾರಕ್ಕೆ ಬಂದರೆ ತಕ್ಷಣ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಅವರು ಹೇಳಿದರು. 

ಯಡಿಯೂರಪ್ಪ ಅವರು ಇಂದು 75 ನೇ ವಸಂತಕ್ಕೆ ಕಾಲಿರಿಸುತ್ತಿದ್ದು, ಬಿಜೆಪಿ ದಾವಣಗೆರೆಯಲ್ಲಿ ಬೃಹತ್‌ ರೈತ ಸಮಾವೇಶ ಆಯೋಜಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡು ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next