Advertisement

ಹಣಕ್ಕಾಗಿ ತಂದೆಯನ್ನೇ ಹೊಡೆದು ಕೊಂದ ಪುತ್ರ

11:14 PM Jan 18, 2020 | Team Udayavani |

ಸೋಮವಾರಪೇಟೆ: ಇಲ್ಲಿಗೆ ಸಮೀಪದ ಗೋಣಿಮರೂರು ಜೇನುಕುರುಬರ ಹಾಡಿಯಲ್ಲಿ ಶುಕ್ರವಾರ ರಾತ್ರಿ ಹಣ ನೀಡದ್ದಕ್ಕಾಗಿ ವ್ಯಕ್ತಿಯೊಬ್ಬ ತಂದೆಯನ್ನೇ ದೊಣ್ಣೆಯಿಂದ ಹೊಡೆದು ಕೊಂದಿದ್ದಾನೆ. ಗೋಣಿಮರೂರು ಹಾಡಿಯ ಕರಿಯಪ್ಪ (46) ಎಂಬುವರನ್ನು ಅವರ ಪುತ್ರ ಲೋಕೇಶ್‌ (25) ಎಂಬಾತ ಕೊಲೆ ಮಾಡಿದ್ದಾನೆ.

Advertisement

ಈ ವೇಳೆ, ಕರಿಯಪ್ಪನ ಪತ್ನಿ ಲೀಲಾ ತೀವ್ರವಾಗಿ ಗಾಯಗೊಂಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ. ಶುಕ್ರವಾರ ರಾತ್ರಿ ಲೋಕೇಶ್‌ ಮದ್ಯ ಸೇವಿಸಲು ತಂದೆಯ ಹತ್ತಿರ ಹಣ ಕೇಳಿದ. ಕರಿಯಪ್ಪ ಹಣ ನೀಡಲು ನಿರಾಕರಿಸಿದ. ಕೋಪಗೊಂಡ ಆರೋಪಿ, ಮರದ ದೊಣ್ಣೆಯಿಂದ ತಂದೆಯ ತಲೆಯ ಭಾಗಕ್ಕೆ ಹೊಡೆದ.

ಈ ವೇಳೆ, ತಡೆಯಲು ಬಂದ ತಾಯಿ ಲೀಲಾಗೂ ದೊಣ್ಣೆಯಿಂದ ಬಾರಿಸಿದ. ಗಂಭೀರವಾಗಿ ಗಾಯಗೊಂಡ ಕರಿಯಪ್ಪ ಸ್ಥಳದಲ್ಲೇ ಕುಸಿದು ಬಿದ್ದು ಅಸುನೀಗಿದರು. ಲೀಲಾರನ್ನು ಮೈಸೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬಳಿಕ, ಮನೆಯಿಂದ ಪರಾರಿಯಾಗಿದ್ದ ಆರೋಪಿಯನ್ನು ಶನಿವಾರ ಮಧ್ಯಾಹ್ನ ಬಾಣಾವರ ಸಮೀಪ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next