Advertisement

ವಿಜಯಪುರ: ಮದ್ಯ ವ್ಯಸನಿ ಮಗನಿಂದ ತಂದೆಯ ಹತ್ಯೆ

09:51 AM Oct 04, 2019 | keerthan |

ವಿಜಯಪುರ : ಮದ್ಯ ವ್ಯಸನಿ ಮಗನೊಬ್ಬ ಬುದ್ದಿ ಹೇಳಲು ಬಂದ ತಂದೆಯನ್ನೇ ಹತ್ಯೆ ಮಾಡಿರುವ ಕೃತ್ಯ ಜಿಲ್ಲೆಯ ಚಡಚಣ ತಾಲೂಕಿನ ಟಾಕಳಿ ಗ್ರಾಮದಲ್ಲಿ ಜರುಗಿದೆ.

Advertisement

ಟಾಕಳಿ ಗ್ರಾಮದ ಅಣ್ಣಪ್ಪ ತೊರವಿ ( 55 ) ಮಗನಿಂದಲೇ ಕೊಲೆಯಾದ ದುರ್ದೈವಿ.

ಮದ್ಯ ವ್ಯಸನಿ  ಸಂಜೀವ ತೊರವಿ ( 38 ) ಎಂಬ ವ್ಯಕ್ತಿಯೇ ತಂದೆಯನ್ನು ಹತ್ಯೆ ಮಾಡಿರುವ ಆರೋಪಿ.

ಸಂಜೀವ ತೊರವಿ ನಿತ್ಯವೂ‌ ಮದ್ಯ ಸೇವನೆ ಮಾಡಿ ಮನೆಗೆ ಬಂದು ಕುಟುಂಬದ ಸದಸ್ಯರೊಂದಿಗೆ ಜಗಳ ತೆಗೆಯುತ್ತಿದ್ದ.

ಇದರಿಂದ ಕುಟುಂಬ ಸದಸ್ಯರು ರೋಸಿ ಹೋಗಿದ್ದರು. ಬುಧವಾರ ರಾತ್ರಿಕೂಡ  ಸಂಜೀವ ಮದ್ಯ ಸೇವಿಸಿ ನಶೆಯಲ್ಲೇ ಮನೆಗೆ ಬಂದು ತನ್ನ ಪತ್ನಿ ಜೊತೆ ಜಗಳ ಮಾಡುತ್ತಿದ್ದ. ಇದನ್ನು ಕಂಡ ತಂದೆ ಅಣ್ಣಪ್ಪ ಬುದ್ದಿವಾದ ಹೇಳಿ ಜಗಳ ಬಿಡಿಸಲು ಬಂದಿದ್ದರು. ಆಗ ಕೊಡಲಿಯಿಂದ ಹೆತ್ತ ತಂದೆಯನ್ನು ಕೊಲೆ ಮಾಡಿದ್ದಾನೆ.

Advertisement

ಈ ಕುರಿತು ಚಡಚಣ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next