Advertisement

ಮದುವೆ ವಿಚಾರದಲ್ಲಿ ಮಗನಿಂದಲೇ ನಿವೃತ್ತ ಎಎಸ್ ಐ ಹತ್ಯೆ

12:47 PM Feb 10, 2022 | Team Udayavani |

ರಾಯಚೂರು: ಮದುವೆ ವಿಚಾರವಾಗಿ ಉಂಟಾದ ಜಗಳದಿಂದಾಗಿ ಮಗನೇ ತಂದೆಯನ್ನು ಕೊಲೆ ಮಾಡಿದ ಘಟನೆ ಬುಧವಾರ ಸಂಜೆ ನಗರದ ಗೋ ಶಾಲೆ ಹಿಂಭಾಗದಲ್ಲಿ ನಡೆದಿದೆ.

Advertisement

ನಿವೃತ್ತ ಎಎಸ್‌ಐ ಬಸವರಾಜಪ್ಪ (75 ವ) ಕೊಲೆಯಾದ ವ್ಯಕ್ತಿ. ಕಿರಿಯ ಮಗ ಜಗದೀಶನೇ ತಂದೆಯ ತಲೆಗೆ ಬಲವಾಗಿ ಹೊಡೆದು ಕೊಲೆಗೈದಿದ್ದಾನೆ.

ಇಡಪನೂರು ಠಾಣೆಯಲ್ಲಿ 15 ವರ್ಷಗಳ ಹಿಂದೆ ನಿವೃತ್ತಿ ಹೊಂದಿ ಗಬ್ಬೂರಿನಲ್ಲಿ ನೆಲೆಸಿದ್ದ ಬಸವರಾಜಪ್ಪ, ಸಂಬಂಧಿಕರ ಮನೆಗೆ ಬಂದಿದ್ದರು. ಆದರೆ, ಕಿರಿಯ ಮಗ ಜಗಳ ಮಾಡಿಕೊಂಡು ಕೊಲೆಗೈದಿದ್ದಾನೆ.

ಇದನ್ನೂ ಓದಿ:ಹೈಕೋರ್ಟ್ ಮೊದಲು ನಿರ್ಧರಿಸಲಿ; ಹಿಜಾಬ್ ಕೇಸ್ ಪ್ರವೇಶಕ್ಕೆ ನಿರಾಕರಿಸಿದ ಸುಪ್ರೀಂ

ಹಿರಿಯ ಮಗ ಶಿವರಾಜ್ ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಮಾರ್ಕೆಟ್ ಯಾರ್ಡ್ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ. ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next