Advertisement

Theft Case ಅಮ್ಮನ ಚಿಕಿತ್ಸೆಗಾಗಿ ಕಳ್ಳತನಗೈದ ಮಗ ಸೆರೆ

12:18 AM Jul 31, 2024 | Team Udayavani |

ಬೆಂಗಳೂರು: ಪ್ರತಿಷ್ಠಿತ ಎಲೆಕ್ಟ್ರಾನಿಕ್ಸ್‌ ಮಳಿಗೆಗಳಿಂದ ಲ್ಯಾಪ್‌ಟಾಪ್‌, ಪೆನ್‌ಡ್ರೈವ್‌ಗಳನ್ನು ಕಳವು ಮಾಡಿದ್ದ ಮಾರಾಟ ಪ್ರತಿನಿಧಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕಾಡುಗೋಡಿ ನಿವಾಸಿ ಆರ್‌. ಶ್ರೀನಿವಾಸ (21) ಆರೋಪಿ. ಆತನಿಂದ 1.5 ಲಕ್ಷ ರೂ. ಮೌಲ್ಯದ 3 ಲ್ಯಾಪ್‌ಟಾಪ್‌ ಹಾಗೂ 5 ಪೆನ್‌ಡ್ರೈವ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ವೇತನದಿಂದ ದೈನಂದಿನ ಖರ್ಚು ವೆಚ್ಚ ಭರಿಸಲು ಸಾಧ್ಯವಾಗುತ್ತಿರಲಿಲ್ಲ. ತಾಯಿಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಚಿಕಿತ್ಸೆ ವೆಚ್ಚ ಭರಿಸಲು ಕಳ್ಳತನ ಮಾಡಿದೆ ಎಂದು ಹೇಳಿದ್ದಾನೆ.

 

Advertisement

Udayavani is now on Telegram. Click here to join our channel and stay updated with the latest news.

Next