Advertisement
ದೇವಾಲಯದ ಆವರಣದಲ್ಲಿ ಸುಂದರ ಕಲ್ಲಿನ ಈಶ್ವರ ಲಿಂಗಗಳಿದ್ದು, ಗರ್ಭಗುಡಿ ಹಾಗೂ ಮುಂಭಾಗದಲ್ಲಿ ಇದ್ದ ಕಲ್ಲಿನ ಗಣೇಶ ಮೂರ್ತಿ, ಈಶ್ವರ ಲಿಂಗಗಳನ್ನು ಕೆಡವಿ ಅದರ ಅಡಿಯಲ್ಲಿ ಕಲ್ಲುಗಳನ್ನು ತೆಗೆದು ಕಳ್ಳರು ನಿಧಿಗಾಗಿ 15 ಅಡಿ ಆಳದ ಗುಂಡಿ ತೋಡಿ ಹುಡುಕಾಟ ನಡೆದಿದ್ದಾರೆ. ಗುಂಡಿ ತೋಡಲಾಗಿದ್ದ ಸ್ಥಳದಲ್ಲಿ ಹೂವು, ವೀಳ್ಯದೆಲೆ ಮುಂತಾದ ಸಾಮಗ್ರಿಗಳು ಸಿಕ್ಕಿವೆ, ನಿಧಿ
Related Articles
Advertisement
ಮುಂಜಾಗ್ರತೆ ಇಲ್ಲ: ತಾಲೂಕಿನಲ್ಲಿ ರಾಜ ಮಹಾರಾಜರು, ಪಾಳೆಗಾರರು ಬೆಲೆಬಾಳುವವಸ್ತುಗಳನ್ನು ಭೂಮಿಯೊಳಗೆ ಹೂತ್ತಿಟ್ಟಿರಬಹುದೆಂಬ ಅನುಮಾನದಿಂದ ನಿಧಿಗಾಗಿ ದುಷ್ಕರ್ಮಿ ಗಳ ಆಗಿಂದಾಗ್ಗೆ ದೇಗುಲಗಳಲ್ಲಿ ಶೋಧ ಕಾರ್ಯನಡೆಸುತ್ತಲೇ ಇದ್ದರೂ ಅಧಿಕಾರಿಗಳು ಮುಂಜಾಗ್ರತ ಕ್ರಮ ವಹಿಸುತ್ತಿಲ್ಲ ಎಂದು ತಾಪಂ ಸದಸ್ಯ ನಟರಾಜು ನಾಕಲಗೂಡು ಮನವಿ ಮಾಡಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಇಲಾಖೆಗೆ ವಿಷಯ ತಿಳಿಸಿದ ಪರಿಣಾಮ ಸಿಬ್ಬಂದಿಯೊಬ್ಬರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರಾದರೂ ಯಾವ ಕ್ರಮ ಕೈಗೊಂಡಿಲ್ಲ. ಇಲಾಖೆ ಅಧಿಕಾರಿಗಳು ದೇವಸ್ಥಾನವನ್ನು ಅಭಿವೃದ್ಧಿ ಪಡಿಸದಿದ್ದರೂ ಯಥಾಸ್ಥಿತಿಯಲ್ಲಿ ಸಂರಕ್ಷಿಸಬೇಕು ಎಂದು ಗ್ರಾಪಂ ಸದಸ್ಯ ಪೃಥ್ವಿಜಯರಾಮ್ ಆಗ್ರಹಿಸಿದ್ದಾರೆ.
ಗ್ರಾಮ ಲೆಕ್ಕಿಗರ ಹಾಗೂ ಕಂದಾಯಅಧಿಕಾರಿಗಳಿಂದ ದೇವಾಲಯದಘಟನೆ ವರದಿಯನ್ನು ಈಗಾಗಲೇ ಪಡೆಯಲಾಗಿದೆ. ದೇವಾಲಯ ಮುಜರಾಯಿಇಲಾಖೆಗೆ ಸೇರಿಲ್ಲ, ಬದಲಾಗಿ ಸ್ಥಳೀಯರು ಈ ಘಟನೆ ಕುರಿತು ಠಾಣೆಗೆ ದೂರುನೀಡಿದರೆ ಶಾಸಕರ ಅಥವಾ ಸಂಸದರ ಅನುದಾನದಲ್ಲಿ ದೇವಸ್ಥಾನದ ಅಭಿವೃದ್ಧಿಗೆಕ್ರಮ ಕೈಗೊಳ್ಳಲಾಗುವುದು. ಸದ್ಯದಲ್ಲಿಯೇ ಸ್ಥಳಕ್ಕೆ ನಾನೇ ಖುದ್ದು ಭೇಟಿ ನೀಡುತ್ತೇನೆ. – ಶಿರೀನ್ತಾಜ್, ತಹಶೀಲ್ದಾರ್