Advertisement

ಪಾಳು ಬಿದ್ದಿದ್ದ ಸೋಮೇಶ್ವರ ದೇಗುಲದಲ್ಲಿನಿಧಿಗಾಗಿ ಶೋಧ

02:09 PM Mar 13, 2021 | Team Udayavani |

ಆಲೂರು: ತಾಲೂಕಿನ ಬಂಡಿತಿಮ್ಮನಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಪುರಾತನ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಿಧಿಗಾಗಿ ದುಷ್ಕರ್ಮಿಗಳು ಗುಂಡಿ ಅಗೆದು ಶೋಧ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ದೇವಾಲಯದ ಆವರಣದಲ್ಲಿ ಸುಂದರ ಕಲ್ಲಿನ ಈಶ್ವರ ಲಿಂಗಗಳಿದ್ದು, ಗರ್ಭಗುಡಿ ಹಾಗೂ ಮುಂಭಾಗದಲ್ಲಿ ಇದ್ದ ಕಲ್ಲಿನ ಗಣೇಶ ಮೂರ್ತಿ, ಈಶ್ವರ ಲಿಂಗಗಳನ್ನು ಕೆಡವಿ ಅದರ ಅಡಿಯಲ್ಲಿ ಕಲ್ಲುಗಳನ್ನು ತೆಗೆದು ಕಳ್ಳರು ನಿಧಿಗಾಗಿ 15 ಅಡಿ ಆಳದ ಗುಂಡಿ ತೋಡಿ ಹುಡುಕಾಟ ನಡೆದಿದ್ದಾರೆ. ಗುಂಡಿ ತೋಡಲಾಗಿದ್ದ ಸ್ಥಳದಲ್ಲಿ ಹೂವು, ವೀಳ್ಯದೆಲೆ ಮುಂತಾದ ಸಾಮಗ್ರಿಗಳು ಸಿಕ್ಕಿವೆ, ನಿಧಿ

ಶೋಧಕ್ಕಿಂತ ಮೊದಲು ಪೂಜೆ ಮಾಡಿರಬಹುದು. ಅಲ್ಲದೆ, ಎರಡು ದಿನಗಳ ಹಿಂದೆ ಈ ಕೃತ್ಯ ನಡೆದಿರ ಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ದೇವಾಲಯದ ಇತಿಹಾಸ: ಯಗಚಿ ನದಿ ದಡದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯ 11, 12ನೇ ಶತಮಾನದ್ದು ಎನ್ನಲಾಗಿದೆ. ಹಿಂದೆ ವಜ್ರ ವೈಡುರ್ಯದಿಂದ ಶೃಂಗರಿಸಿದ್ದ ಸೋಮೇಶ್ವರಸ್ವಾಮಿಯ ರಥೋತ್ಸವ ಜಾತ್ರೆ ನಡೆಯುತ್ತಿತಂತೆ.  ಬಂಡಿ ಚಕ್ರದ ರಥ ನಡೆಯುತ್ತಿದ್ದರಿಂದ ಈ ಸ್ಥಳಕ್ಕೆ ಬಂಡಿತಿಮ್ಮನಹಳ್ಳಿ ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ.

80ರ ದಶಕದಲ್ಲಿ ಇದೇ ದೇಗಲದಲ್ಲಿ ಕಳವು ಮಾಡಲು ಬಂದಾಗ ದೇವರ ವಿಗ್ರಹವನ್ನು ಭರ್ಗಗುಡಿಯಿಂದ ಹೊರತಂದು ಯಗಜಿ ನದಿಯನ್ನು ಹಾದು ಹೋಗುವಾಗ ಇಬ್ಬರು ಕಳ್ಳರು ರಕ್ತಸ್ರಾವದಿಂದ ಮೃತಪಟ್ಟಿದ್ದರಂತೆ. ಅಲ್ಲಿಂದವಿಗ್ರಹವನ್ನು ಮತ್ತೆ ದೇಗುಲಕ್ಕೆ ತಂದಾಗ ಶಾಸ್ತ್ರದಲ್ಲಿ ನರಮನುಷ್ಯನ ಬಲಿಯಾಗಬೇಕು ಎಂದು ಹೇಳಲಾಗಿದ್ದರಿಂದ ಯಾರೊಬ್ಬರೂ ಆ ದೇವಸ್ಥಾನದ ಕಡೆ ಮುಖ ಮಾಡುತ್ತಿರಲಿಲ್ಲ. ಅಲ್ಲದೆ, ನಿಧಿಯನ್ನು ನಾಗರ ಹಾವು ಕಾಯುತ್ತಿತ್ತು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

Advertisement

ಮುಂಜಾಗ್ರತೆ ಇಲ್ಲ: ತಾಲೂಕಿನಲ್ಲಿ ರಾಜ ಮಹಾರಾಜರು, ಪಾಳೆಗಾರರು ಬೆಲೆಬಾಳುವವಸ್ತುಗಳನ್ನು ಭೂಮಿಯೊಳಗೆ ಹೂತ್ತಿಟ್ಟಿರಬಹುದೆಂಬ ಅನುಮಾನದಿಂದ ನಿಧಿಗಾಗಿ ದುಷ್ಕರ್ಮಿ ಗಳ ಆಗಿಂದಾಗ್ಗೆ ದೇಗುಲಗಳಲ್ಲಿ ಶೋಧ ಕಾರ್ಯನಡೆಸುತ್ತಲೇ ಇದ್ದರೂ ಅಧಿಕಾರಿಗಳು ಮುಂಜಾಗ್ರತ ಕ್ರಮ ವಹಿಸುತ್ತಿಲ್ಲ ಎಂದು ತಾಪಂ ಸದಸ್ಯ ನಟರಾಜು ನಾಕಲಗೂಡು ಮನವಿ ಮಾಡಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಇಲಾಖೆಗೆ ವಿಷಯ ತಿಳಿಸಿದ ಪರಿಣಾಮ ಸಿಬ್ಬಂದಿಯೊಬ್ಬರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರಾದರೂ ಯಾವ ಕ್ರಮ ಕೈಗೊಂಡಿಲ್ಲ. ಇಲಾಖೆ ಅಧಿಕಾರಿಗಳು ದೇವಸ್ಥಾನವನ್ನು ಅಭಿವೃದ್ಧಿ ಪಡಿಸದಿದ್ದರೂ ಯಥಾಸ್ಥಿತಿಯಲ್ಲಿ ಸಂರಕ್ಷಿಸಬೇಕು ಎಂದು ಗ್ರಾಪಂ ಸದಸ್ಯ ಪೃಥ್ವಿಜಯರಾಮ್‌ ಆಗ್ರಹಿಸಿದ್ದಾರೆ.

ಗ್ರಾಮ ಲೆಕ್ಕಿಗರ ಹಾಗೂ ಕಂದಾಯಅಧಿಕಾರಿಗಳಿಂದ ದೇವಾಲಯದಘಟನೆ ವರದಿಯನ್ನು ಈಗಾಗಲೇ ಪಡೆಯಲಾಗಿದೆ. ದೇವಾಲಯ ಮುಜರಾಯಿಇಲಾಖೆಗೆ ಸೇರಿಲ್ಲ, ಬದಲಾಗಿ ಸ್ಥಳೀಯರು ಈ ಘಟನೆ ಕುರಿತು ಠಾಣೆಗೆ ದೂರುನೀಡಿದರೆ ಶಾಸಕರ ಅಥವಾ ಸಂಸದರ ಅನುದಾನದಲ್ಲಿ ದೇವಸ್ಥಾನದ ಅಭಿವೃದ್ಧಿಗೆಕ್ರಮ ಕೈಗೊಳ್ಳಲಾಗುವುದು. ಸದ್ಯದಲ್ಲಿಯೇ ಸ್ಥಳಕ್ಕೆ ನಾನೇ ಖುದ್ದು ಭೇಟಿ ನೀಡುತ್ತೇನೆ. ಶಿರೀನ್‌ತಾಜ್‌, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next