Advertisement

ಸೋಮೇಶ್ವರ ಗ್ರಾಮ.ಪಂ.ಉಪಾಧ್ಯಕ್ಷೆ ಮನೆಗೆ ಸಿಡಿಲು

12:33 PM May 29, 2018 | Team Udayavani |

ಉಳ್ಳಾಲ: ಸೋಮೇಶ್ವರ ಗ್ರಾಮ ಪಂಚಾಯತ್‌ ಉಪಾಧ್ಯಕ್ಷೆ ಸುಶೀಲಾ ಎಸ್‌. ನಾಯಕ್‌  ಅವರ ಕುಂಪಲ ಕೃಷ್ಣನಗರದ  ಮನೆಗೆ ರವಿವಾರ ರಾತ್ರಿ ಸಿಡಿಲು ಬಡಿದು ಹಾನಿಯಾಗಿದೆ. ರವಿವಾರ ಸಂಜೆ ಯಿಂದಲೇ ಗುಡುಗು ಸಹಿತ ಮಳೆ ಯಾಗಿದ್ದು ರಾತ್ರಿ ಸಿಡಿಲು ಅವರ ಮನೆಯ ತಾರಸಿಗೆ ಬಡಿಯಿತು. ತಾರಸಿಯ ಸಿಮೆಂಟ್‌ ಎದ್ದು, ಕಿರಿದಾದ ಹೊಂಡ ನಿರ್ಮಾಣವಾಗಿದೆ. ವಿದ್ಯುತ್‌ ಉಪಕರಣಗಳು ಸುಟ್ಟು ಹೋಗಿವೆ.

Advertisement

ಘಟನೆ ವೇಳೆ ಸುಶೀಲಾ ಹಾಗೂ ಪತಿ ನಿವೃತ್ತ ತಹಶೀಲ್ದಾರ್‌ ಎಸ್‌.ಎಸ್‌. ನಾಯಕ್‌ ಮನೆಯೊಳಗಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಈ ಮನೆಯ ಗೃಹಪ್ರವೇಶವಾಗಿತ್ತು.  ಸ್ಥಳಕ್ಕೆ ಸೋಮೇಶ್ವರ ಗ್ರಾ.ಪಂ. ಅಧ್ಯಕ್ಷ  ರಾಜೇಶ್‌ ಉಚ್ಚಿಲ್‌ ಸೇರಿದಂತೆ ಪಂಚಾಯತ್‌ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next