Advertisement

ಕೆಲ ಕಾಂಗ್ರೆಸ್‌ ಶಾಸಕರು ನಮ್ಮನ್ನು ಸಂಪರ್ಕಿಸಿದ್ದರು : ವಾಮನಾಚಾರ್ಯ 

12:54 PM Jan 16, 2019 | |

ಹೊಸದಿಲ್ಲಿ: ಕೆಲ ಕಾಂಗ್ರೆಸ್‌ ಶಾಸಕರು ನಮ್ಮ ಶಾಸಕರಾದ ಸಿ.ಎನ್‌‌. ಅಶ್ವಥ್‌ ನಾರಾಯಣ್‌ ಅವರನ್ನು ಸಂಪರ್ಕಿಸಿದ್ದರು, ಹಾಗಾಗಿ ನಾವು ಮುಂಬಯಿಗೆ ತೆರಳಿ ಅವರನ್ನು ಭೇಟಿಯಾಗಿದ್ದು  ಎಂದು ಬಿಜೆಪಿ ವಕ್ತಾರ ವಾಮಾನಾಚಾರ್ಯ ಅವರು ಬುಧವಾರ ಹೇಳಿಕೆ ನೀಡಿದ್ದಾರೆ. 

Advertisement

ಆಪರೇಷನ್‌ ಕಮಲ ಕಾರ್ಯಾಚರಣೆಯ ಮೂಲಕ ಸರ್ಕಾರ ಪತನಕ್ಕೆ ಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್‌,ಜೆಡಿಎಸ್‌ ಆರೋಪಿಸುವ ವೇಳೆಯಲ್ಲೇ ಈ ಹೇಳಿಕೆ ನೀಡಿದ್ದಾರೆ. 

ಜನರ ಆಶಯದಂತೆ ಸರ್ಕಾರ ಪತನವಾದರೆ, ನಾವು ಸರಕಾರ ರಚಿಸುತ್ತೇವೆ ಎಂದು ವಾಮಾನಾಚಾರ್ಯ ಹೇಳಿದ್ದಾರೆ. 

ನಮ್ಮ ಶಾಸಕರಿಗೆ ಲೋಕಸಭಾ ಚುನಾವಣೆ ವೇಳೆ ಹೆಚ್ಚಿನ ಮನೋ ಸ್ಥೈರ್ಯ ಮತ್ತು ಆತ್ಮಬಲ ತುಂಬಲು ಗುರುಗ್ರಾಮದಲ್ಲಿ ಇರಿಸಿದ್ದೇವೆ ಎಂದು ಇದೇ ವೇಳೆ ವಾಮನಾಚಾರ್ಯ ಅವರು ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next