Advertisement

ರೆಸಾರ್ಟ್‌ ರಾಜಕೀಯಕ್ಕೆ ಕೆಲವು ಶಾಸಕರ ಅತೃಪ್ತಿ

01:30 AM Jan 19, 2019 | |

 ಬೆಂಗಳೂರು: ಬಿಜೆಪಿಯವರ ರೆಸಾರ್ಟ್‌ ರಾಜಕೀಯ ವಿರೋಧಿಸಿ ಈಗ ನಾವೇ ರೆಸಾರ್ಟ್‌ಗೆ ಹೋದರೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ ಎಂದು ಕಾಂಗ್ರೆಸ್‌ನ ಕೆಲ ಶಾಸಕರು ಪಕ್ಷದ ನಾಯಕರ ನಿರ್ಧಾರದ ವಿರುದಟಛಿ ಅಸಮಾಧಾನ ಹೊರ ಹಾಕಿದ್ದಾರೆ. ಪಕ್ಷದ ನಾಯಕರ ಆದೇಶದಂತೆ ಒಂದು ದಿನದ ಶಾಸಕಾಂಗ ಸಭೆಗೆ ಆಗಮಿಸಿ, ಈಗ ಏಕಾಏಕಿ ರೆಸಾರ್ಟ್‌ಗೆ ತೆರಳುವಂತೆ ಸೂಚಿಸಿರುವುದಕ್ಕೆ ಕೆಲವು ಶಾಸಕರು ಮನಸಿಲ್ಲದೇ ಅನಿವಾರ್ಯವಾಗಿ ರೆಸಾರ್ಟ್‌ಗೆ ತೆರಳಿದರು. ಕೆಲವು ಶಾಸಕರು ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ನಿಗದಿ ಮಾಡಿದ್ದು, ಈಗಾಗಲೇ ನಿಗದಿಯಾಗಿದ್ದ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಆಪ್ತರಿಗೆ ಸೂಚಿಸಿದರು. ದಿಢೀರನೆ ತೆಗೆದುಕೊಂಡಿರುವ ಈ ತೀರ್ಮಾನದಿಂದ ಮತ್ತೆ ಕ್ಷೇತ್ರಕ್ಕೆ ಯಾವಾಗ ಹೋಗುತ್ತೇವೆ ಎನ್ನುವ ಬಗ್ಗೆಯೂ ಶಾಸಕರಿಗೆ ಸ್ಪಷ್ಟ ಸೂಚನೆ ನೀಡದಿರುವುದರಿಂದ ಬೇಸರದಿಂದಲೇ ರೆಸಾರ್ಟ್‌ಗೆ ತೆರಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next