Advertisement

ಪರಿಹಾರ: ನಿರ್ಮಲಾ ಟ್ವೀಟ್‌ ಮೂಲಕ ಭರವಸೆ

11:25 PM Oct 01, 2019 | Team Udayavani |

ಬೆಂಗಳೂರು: ರಾಜ್ಯದ ಪ್ರವಾಹ ಹಾಗೂ ಮಳೆ ಹಾನಿಗೆ ಕೇಂದ್ರದಿಂದ ಅನುದಾನ ಬಾರದೇ ಇರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶಕ್ಕೆ ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್‌ ಅವರ ಕಚೇರಿಯಿಂದ ಮಂಗಳವಾರ ಟ್ವೀಟ್‌ ಮಾಡುವ ಮೂಲಕ ಭರವಸೆ ನೀಡಲಾಗಿದೆ.

Advertisement

ಕರ್ನಾಟಕದಲ್ಲಾದ ಹಾನಿಯನ್ನು ಕೇಂದ್ರದ ಅಂತರ್‌ ಸಚಿವಾಲಯದ ತಂಡ (ಐಎಂಸಿಟಿ) ಪರಿಶೀಲನೆ ನಡೆಸಿ, ವರದಿ ಸಿದ್ಧಪಡಿಸಿತ್ತು. ಈ ವರದಿಯಂತೆ ಕಾರ್ಯಪ್ರವೃತ್ತರಾಗಿದ್ದೇವೆ. ಐಎಂಸಿಟಿ ತಂಡವು ಆಗಸ್ಟ್‌ 24ರಿಂದ 27ರವರೆಗೆ ಕರ್ನಾಟಕದ 5 ಜಿಲ್ಲೆಗಳಲ್ಲಿ ಪ್ರವಾಸ ಮಾಡಿತ್ತು.

ಈ ತಂಡವು ಸಿಎಂಯಡಿಯೂರಪ್ಪ ಮತ್ತು ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದಿತ್ತು. ಈ ಸಂಬಂಧ ಕರ್ನಾಟಕ ಸರ್ಕಾರವು ಸೆ.2ರಂದು ಅನುದಾನ ಕೋರಿ ಮನವಿ ಸಲ್ಲಿಸಿತ್ತು. ಐಎಂಸಿಟಿ ವರದಿಯು ಅಂತಿಮ ಹಂತದಲ್ಲಿದೆ ಎಂದು ಕೇಂದ್ರ ವಿತ್ತ ಸಚಿವರ ಕಚೇರಿಯಿಂದ ಟ್ವೀಟ್‌ ಮಾಡಲಾಗಿದೆ. ಇದಕ್ಕೆ ನೆಟ್ಟಿಗರಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವರು ಮಾತು ಸಾಕು, ಅನುದಾನ ಕೊಡಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next