Advertisement
ಪ್ರಸ್ತಾವಿತ ಕಡಬ ತಾಲೂಕು ಸಹಿತ ಪುತ್ತೂರು ತಾಲೂಕಿನ ಒಟ್ಟು 41 ಗ್ರಾ.ಪಂ.ಗಳ ಪೈಕಿ 2 ಗ್ರಾ.ಪಂ.ಗಳಲ್ಲಿ ಮಾತ್ರ ಘನತ್ಯಾಜ್ಯ ವಿಲೇವಾರಿ ಘಟಕ ಪೂರ್ಣಗೊಂಡಿದೆ. ಉಳಿದ 39 ಗ್ರಾ.ಪಂ.ಗಳಲ್ಲಿ ಇನ್ನೂ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣವಾಗಿಲ್ಲ. ಇದರಲ್ಲಿ 18 ಗ್ರಾ.ಪಂ.ಗಳು ಇನ್ನೂ ಪ್ರಸ್ತಾವನೆಯನ್ನೇ ಸಲ್ಲಿಸಿಲ್ಲ. ಘನತ್ಯಾಜ್ಯ ನಿರ್ವಹಣೆ ಘಟಕದ ಗಂಭೀರತೆಯನ್ನು ಇನ್ನೂ ಅರ್ಥ ಮಾಡಿಕೊಂಡಂತೆ ಕಾಣುವುದಿಲ್ಲ.
Related Articles
Advertisement
ಮಿತಿಮೀರಿ ಬೆಳೆಯುತ್ತಿರುವ ಪ್ಲಾಸ್ಟಿಕ್ ಸ್ಥಳೀಯ ಆಡಳಿತಕ್ಕೆ ದೊಡ್ಡ ತಲೆನೋವು. ಹಸಿ ಕಸವನ್ನು ಮನೆಯಲ್ಲೇ ಗೊಬ್ಬರ ಮಾಡಿ, ಒಣ ಕಸವನ್ನು ಘಟಕಕ್ಕೆ ನೀಡಬೇಕು ಎನ್ನುವುದು ಆಲೋಚನೆ. ಈ ಒಣ ಕಸವನ್ನು ವಿಂಗಡಿಸಿ, ಮರುಬಳಕೆಗೆ ವಿನಿಯೋಗ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿರೋಧವೂ ಇದೆ
ಪುತ್ತೂರು ತಾಲೂಕಿನ ಮಟ್ಟಿಗೆ ತ್ಯಾಜ್ಯ ವಿಲೇವಾರಿ ಘಟಕ ಇರುವುದು ಬನ್ನೂರು ಡಂಪಿಂಗ್ ಯಾರ್ಡ್ ಮಾತ್ರ. ಇದು ನಗರಸಭೆ ವ್ಯಾಪ್ತಿಗೆ ಸೀಮಿತ. ಇದರ ನಿರ್ವಹಣೆ ಕೊರತೆಯಿಂದ ಸ್ಥಳೀಯರ ವಿರೋಧ ಎದುರಿಸುತ್ತಿದೆ. ಇದೇ ಮಾದರಿಯನ್ನು ತೆಗೆದುಕೊಂಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಮಾಡಿದರೆ ಹೇಗೆ ಎನ್ನುವುದು ಗ್ರಾಮಸ್ಥರ ಆತಂಕ. ಇದನ್ನು ಅರ್ಥೈಸಿಕೊಂಡ ಕೆಲ ಗ್ರಾ.ಪಂ.ಗಳು, ಘಟಕ ನಿರ್ಮಾಣಕ್ಕೆ ಹಿಂದೇಟು ಹಾಕಿರುವುದು ಸುಳ್ಳಲ್ಲ. ಏಕೆಂದರೆ, ಆಯಾ ವಾರ್ಡ್ನ ನಿವಾಸಿಗಳೇ ಅಲ್ಲಿನ ಗ್ರಾ.ಪಂ. ಸದಸ್ಯರಾಗಿರುತ್ತಾರೆ. ಗ್ರಾಮಸ್ಥರ ಈ ಆತಂಕವನ್ನು ಅಲ್ಲಗಳೆಯುವಂತೆ ಇಲ್ಲ. ಇಂದಿನ ಡಂಪಿಂಗ್ ಯಾರ್ಡ್ಗಳ ಸ್ಥಿತಿಯ ನಿರ್ವಹಣೆ ಪ್ರಶ್ನೆ ಯಾರಿಗಾದರೂ ಮೂಡದೇ ಇರದು. ಆದ್ದರಿಂದ ಘಟಕ ನಿರ್ಮಾಣದ ಜತೆಗೆ ನಿರ್ವಹಣೆ ಬಗ್ಗೆಯೂ ಜಿ.ಪಂ. ಸರಿಯಾದ ಮಾಹಿತಿ ನೀಡಬೇಕಾದ ಅಗತ್ಯ ಇದೆ.
ವೈಜ್ಞಾನಿಕವಾಗಿ ವಿಲೇವಾರಿತಾಲೂಕಿನ 41 ಗ್ರಾ.ಪಂ.ಗಳಲ್ಲಿ ಘಟಕ ನಿರ್ಮಾಣ ಕಷ್ಟ. ಆದರೆ 30ರಲ್ಲಾದರೂ ಮಾಡಲೇಬೇಕೆನ್ನುವ ಗುರಿ ಹೊಂದಲಾಗಿದೆ. ಕೆಲ ಸಣ್ಣ ಗ್ರಾ.ಪಂ.ಗಳನ್ನು ಸಮೀಪದ ಗ್ರಾ.ಪಂ.ಗಳಿಗೆ ಹೊಂದಿಸಿಕೊಂಡು ವಿಲೇ ಘಟಕ ಮಾಡುವ ಅಲೋಚನೆಯೂ ಇದೆ. ಕೊಳ್ತಿಗೆ, ಒಳಮೊಗ್ರು, ಕಬಕದಲ್ಲಿ ಅರಣ್ಯ ಸಮಸ್ಯೆ ಇದೆ. ಇದಕ್ಕೆ ಪರ್ಯಾಯ ಅಥವಾ ಪರಿಹಾರ ಕ್ರಮ ಕೈಗೊಳ್ಳಬೇಕಿದೆ. ಡಂಪಿಂಗ್ ಯಾರ್ಡ್ ನಲ್ಲಿ ನಿರ್ವಹಣೆ ಇಲ್ಲದೇ ಇದ್ದರೆ ಸಮಸ್ಯೆ. ಗ್ರಾ.ಪಂ.ಗಳಲ್ಲಿ ವಿಂಗಡಣೆ ಮಾಡಿಯೇ ತೆಗೆದುಕೊಳ್ಳುತ್ತೇವೆ. ಆಗ ಸಮಸ್ಯೆ ಆಗುವುದೇ ಇಲ್ಲ. ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು.– ಜಗದೀಶ್, ಇಒ, ತಾ.ಪಂ., ಪುತ್ತೂರು ಗಣೇಶ್ ಎನ್. ಕಲ್ಲರ್ಪೆ