Advertisement

ಸೈನಿಕನ ತಾಯಿ ಕೊಲೆ ಪ್ರಕರಣ; ಆರೋಪಿ ಶರಣಪ್ಪಗೌಡ ಬಂಧನ

05:53 PM Mar 24, 2022 | Team Udayavani |

ಹಟ್ಟಿಚಿನ್ನದಗಣಿ: ನಿಲೋಗಲ್‌ ಗ್ರಾಮದಲ್ಲಿನ ಸೈನಿಕನ ತಾಯಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಟ್ಟಿ ಠಾಣೆ ಸಿಪಿಐ ಹಾಗೂ ಸಿಬ್ಬಂದಿ ಘಟನೆ ನಡೆದು ತಿಂಗಳ ನಂತರ ಪ್ರಮುಖ ಆರೋಪಿ ಶರಣಪ್ಪಗೌಡನನ್ನು ಬಂಧಿಸಿದ್ದಾರೆ.

Advertisement

ಫೆ.14ರಂದು ನಿಲೋಗಲ್‌ನಲ್ಲಿ ಮನೆ ಬಚ್ಚಲು ನೀರು ಜಮೀನಿನಲ್ಲಿ ಹರಿಯುವ ಕುರಿತು ಸೈನಿಕ ಅಮರೇಶನ ಮೇಲೆ ಶರಣಪ್ಪಗೌಡ ಹಾಗೂ ಬೆಂಬಲಿಗರ ಮಧ್ಯೆ ಜಗಳ ಉಂಟಾಗಿತ್ತು. ಕೊಲೆ ಪ್ರಮುಖ ಆರೋಪಿ ಶರಣಪ್ಪಗೌಡ ಹಾಗೂ ಬೆಂಬಲಿಗರು ಮನೆಗೆ ನುಗ್ಗಿ ತಾಯಿ ಈರಮ್ಮಳನ್ನು ತಳ್ಳಿ ಹೊಡೆದು ಕೊಲೆ ಮಾಡಿದ್ದಾರೆಂದು 18 ಜನರ ವಿರುದ್ಧ ಯೋಧ ಅಮರೇಶ ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಕೃತ್ಯ ಖಂಡಿಸಿ ಮೃತಳ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಶರಣಪ್ಪಗೌಡನ ಮನೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಕೊಲೆ ಆರೋಪಿಗಳನ್ನು ಬಂಧಿಸಬೇಕೆಂದು ನಿವೃತ್ತ ಸೈನಿಕ ಸಂಘದವರು ಹಾಗೂ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಐಕ್ಯ ಹೋರಾಟ ವೇದಿಕೆ ವತಿಯಿಂದಲೂ ಪ್ರತಿಭಟನೆ ನಡೆಸಿ ಪ್ರಮುಖ ಆರೋಪಿ ಶರಣಪ್ಪಗೌಡನ ಬಂಧನಕ್ಕೆ ಒತ್ತಾಯಿಸಿದ್ದರು.

ಘಟನೆ ನಡೆದು ತಿಂಗಳು ಗತಿಸಿದ ಮೇಲೆ ಕೊಲೆ ಪ್ರಮುಖ ಆರೋಪಿ ಶರಣಪ್ಪಗೌಡ, ಬಸವರಾಜ ಬೆಂಚಮಟ್ಟಿ, ಮತ್ತಪ್ಪ ಬಾರಿಕೇರ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next