Advertisement

ಮತಕ್ಕಾಗಿ ಸೈನಿಕರ ಹತ್ಯೆ: ಎಸ್‌ಪಿ ಸಂಸದ

12:30 AM Mar 22, 2019 | |

ಲೋಕಸಭೆ ಚುನಾವಣೆಗಾಗಿಯೇ ಪುಲ್ವಾಮಾದಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರನ್ನು ಹತ್ಯೆ ಮಾಡಲಾಗಿದೆ ಎಂದು ಸಮಾಜವಾದಿ ಪಕ್ಷದ ಸಂಸದ ರಾಂ ಗೋಪಾಲ್‌ ಯಾದವ್‌ ಆರೋಪಿಸಿದ್ದಾರೆ. 

Advertisement

ಕೇಂದ್ರ ಸರಕಾರದ ಧೋರಣೆಯಿಂದಾಗಿ ಅರೆ ಸೇನಾಪಡೆಗಳು ದುಃಖೀತವಾಗಿವೆ. ಜಮ್ಮು ಮತ್ತು ಶ್ರೀನಗರ ನಡುವೆ ಸೈನಿಕರು ಸಾಮಾನ್ಯ ಬಸ್‌ಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ಅವರ ಭದ್ರತೆಗಾಗಿ ಯಾವುದೇ ಕ್ರಮಗಳು ಇಲ್ಲ. ಈ ಬಗ್ಗೆ ಹೆಚ್ಚಿನ ಮಾತುಗಳ ನ್ನಾಡಲು ಬಯಸುವುದಿಲ್ಲ ಎಂದು ಉತ್ತರ ಪ್ರದೇಶದ ಸೈಫಿಯಲ್ಲಿ ಹೇಳಿದ್ದಾರೆ.

ಈ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಯೋಧರ ಆತ್ಮಸ್ಥೈರ್ಯ ಕುಂದಿಸುವ ಮಾತು ಗಳನ್ನಾಡಿದ ಎಸ್‌ಪಿ ನಾಯಕ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಕರ್ನಾಟಕದ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಕೂಡ ಹೇಳಿಕೆ ಖಂಡಿಸಿ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next