Advertisement

ಕನ್ನಡಿಗ ಯೋಧನಿಗೆ ಗುಂಡೇಟು; ಚೇತರಿಕೆ

10:15 AM Jun 09, 2019 | Team Udayavani |

ಮಡಿಕೇರಿ: ಭಾರತೀಯ ಸೇನೆಯ 44ನೇ ರಾಷ್ಟ್ರೀಯ ರೈಫ‌ಲ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಶೌರ್ಯಚಕ್ರ ಪುರಸ್ಕೃತ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ನಿವಾಸಿ ಎಚ್‌.ಎನ್‌. ಮಹೇಶ್‌ ಅವರಿಗೆ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಗುಂಡೇಟು ತಗುಲಿದ್ದು, ಪಂಜಾಬಿನ ಚಂಡೀಗಢ ಸೇನಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

Advertisement

ಮೇ 29ರಂದು ಈ ಘಟನೆ ನಡೆದಿದ್ದು ತಡ ವಾಗಿ ಬೆಳಕಿಗೆ ಬಂದಿದೆ. ಜೂ. 6ರಂದು ಪೋಷಕರಿಗೆ ಕರೆ ಮಾಡಿರುವ ಮಹೇಶ್‌ ಘಟನೆಯ ಬಗ್ಗೆ ಮಾಹಿತಿ ನೀಡಿ ಪ್ರಸ್ತುತ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಪೊನ್ನಂಪೇಟೆ ಗಾಂಧಿನಗರದ ನಾಗರಾಜ್‌ ಮತ್ತು ಲಕ್ಷ್ಮೀ ದಂಪತಿ ಪುತ್ರ ಮಹೇಶ್‌ 7 ವರ್ಷದ ಹಿಂದೆ ಆರ್ಮಿ ಎಂಜಿನಿಯರಿಂಗ್‌ ಕಾಪ್ಸ್‌ìಗೆ ಸೇರಿದ್ದರು. ಬಳಿಕ ಅವರನ್ನು ಜಮ್ಮು ಕಾಶ್ಮೀರದಲ್ಲಿರುವ 44ನೇ ರಾಷ್ಟ್ರೀಯ ರೈಫ‌ಲ್ಸ್‌ಗೆ ನೇಮಕ ಮಾಡಲಾಗಿತ್ತು.

ಉಗ್ರರಿಂದ ಫೈರಿಂಗ್‌
ಮೇ 29ರಂದು ಜಮ್ಮು ಕಾಶ್ಮೀರದ ಶೋಫಿಯಾನ್‌ ಜಿಲ್ಲೆಯ ಮನೆಯೊಂದರಲ್ಲಿ ನಾಲ್ವರು ಉಗ್ರರು ಆಶ್ರಯ ಪಡೆದಿರುವ ಮಾಹಿತಿ ಕಲೆ ಹಾಕಿದ ರಾಷ್ಟ್ರೀಯ ರೈಫ‌ಲ್ಸ್‌ನ 60 ಮಂದಿ ಯೋಧರು ಮನೆಯನ್ನು ಸುತ್ತುವರಿದು ಶರಣಾಗುವಂತೆ ಸೂಚಿಸಿದ್ದರು. ಈ ವೇಳೆ ಉಗ್ರರು ಸಿಡಿಸಿದ ಗುಂಡು ಮಹೇಶ್‌ ಅವರ ಮುಖಕ್ಕೆ ಬಡಿಯಿತು. ಇದೇ ವೇಳೆ ಮಹೇಶ್‌ ಜತೆಗಿದ್ದ ಯೋಧರು ಉಗ್ರರು ಅವಿತಿದ್ದ ಮನೆಯನ್ನೇ ಸ್ಫೋಟಿಸಿ ನಾಲ್ವರು ಉಗ್ರರನ್ನೂ ಕೊಂದು ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next