Advertisement

ಅಯ್ಯೋ ವಿಧಿಯೇ ..ಬಳ್ಳಾರಿಯ ಯೋಧ ಮದುವೆಯ 2 ದಿನ ಮುನ್ನ ಜ್ವರಕ್ಕೆ ಬಲಿ

03:14 PM Jun 30, 2017 | |

 ಬಳ್ಳಾರಿ: ವಿಧಿ ಅತ್ಯಂತ ಕ್ರೂರಿ ಎನ್ನುವುದಕ್ಕೆ ಮನಕಲುಕುವ ಈ ದಾರುಣ ಘಟನೆ ಸಾಕ್ಷಿ . ಹೂವಿನ ಹಡಗಲಿಯ ಯೋಧ ಹಸೆ ಮಣೆ ಏರುವ 2 ದಿನ ಮುನ್ನ  ಜ್ವರಕ್ಕೆ ಬಲಿಯಾಗಿದ್ದಾರೆ. 

Advertisement

ಬಸರಹಳ್ಳಿ ಗ್ರಾಮದ ಹನುಮಂತಪ್ಪ ಕೊರ್ಲಗಟ್ಟಿ ಎಂಬ 30 ರ ಹರೆಯದ ಸಶಸ್ತ್ರ ಮೀಸಲು ಪಡೆಯ ಯೋಧ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಜಾರ್ಖಂಡ್‌ನ‌ಲ್ಲಿ ಸೇವೆ ಸಲ್ಲಿಸುತ್ತಿದ್ದರು. 

ಜುಲೈ 1 ರಂದು ವಿವಾಹ ನಿಗದಿಯಾಗಿದ್ದು ಮನೆಯಲ್ಲಿದ್ದ ಸಂಭ್ರಮದ ವಾತಾವರಣ ಬದಲಾಗಿ ರೋಧನ ಮುಗಿಲು ಮುಟ್ಟಿದೆ. 

ಜ್ವರದಿಂದ ಬಳಲುತ್ತಿದ್ದ ಹನುಮಂತಪ್ಪ ಅವರನ್ನು  ಮುಂಡರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next