Advertisement

ಶ್ರೀನಗರ ಉಗ್ರರ ದಾಳಿಗೆ ಕಿತ್ತೂರು ಯೋಧ ಹುತಾತ್ಮ

03:45 AM Apr 05, 2017 | Team Udayavani |

ಶ್ರೀನಗರ/ಕಿತ್ತೂರು: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಉಗ್ರರೊಂದಿಗೆ ಭಾನುವಾರ ರಾತ್ರಿ ನಡೆದ ಗುಂಡಿನ ಕಾಳಗದಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರ ಗ್ರಾಮದ ಸಿಆರ್‌ಪಿಎಫ್‌ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.  ಶ್ರೀನಗರದ ಪಠಾಣಚೌಕ ಹತ್ತಿರ ಸೈನಿಕರ ವಾಹನದ ಮೇಲೆ ಉಗ್ರರ ಹಠಾತ್‌ ದಾಳಿ ನಡೆದಿದ್ದರಿಂದ ಯೋಧ ಬಸಪ್ಪ ಹನಮಂತಪ್ಪ ಭಜಂತ್ರಿ (50) ಬಲಿಯಾಗಿದ್ದಾರೆ.

Advertisement

ಬಸಪ್ಪ 19 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಇನ್ನೊಂದು ವರ್ಷ ಸೇವಾವಧಿ ಇತ್ತೆಂದು ತಿಳಿದು ಬಂದಿದೆ. ಸಿಆರ್‌ಪಿಎಫ್‌ನ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ ಭಜಂತ್ರಿ ಅವರಿಗೆ ತಂದೆ, ತಾಯಿ, ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಮೂವರು ಸಹೋದರರು ಇದ್ದಾರೆ.

ಸುದ್ದಿ ತಿಳಿಯುತ್ತಿದಂತೆ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಯೋಧನ ಸಾವಿಗೆ ಇಡೀ ಗ್ರಾಮವೇ ದುಃಖದಲ್ಲಿದೆ. ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಗ್ರಾಮದ ಪ್ರೌಢ ಶಾಲಾ ಆವರಣದಲ್ಲಿ ಸಿದ್ಧತೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next