Advertisement

ತಮಿಳುನಾಡು: ಯೋಧನನ್ನೇ ಹತ್ಯೆ ಮಾಡಿದ ಗುಂಪು; ಡಿಎಂಕೆ ಕೌನ್ಸಿಲರ್ ಕೂಡ ಭಾಗಿ

06:51 PM Feb 15, 2023 | Team Udayavani |

ಚೆನ್ನೈ:ತಮಿಳುನಾಡಿನಲ್ಲಿ ನಡೆದ ಬೆಚ್ಚಿ ಬೀಳಿಸುವ ಘಟನೆಯಲ್ಲಿ ಡಿಎಂಕೆ ಕೌನ್ಸಿಲರ್ ಮತ್ತು ಇತರರು ಯೋಧನನ್ನೇ ಹತ್ಯೆ ಮಾಡಿದ ಘಟನೆ ನಡೆದಿದೆ.

Advertisement

ತಮಿಳುನಾಡಿನ ಕೃಷ್ಣಗಿರಿಯಲ್ಲಿ ನೀರಿನ ಟ್ಯಾಂಕ್ ಬಳಿ ಬಟ್ಟೆ ಒಗೆಯುವ ವಿವಾದದ ಹಿನ್ನೆಲೆಯಲ್ಲಿ 33 ವರ್ಷದ ಸೇನಾ ಯೋಧನನ್ನು ಡಿಎಂಕೆ ಕೌನ್ಸಿಲರ್ ಮತ್ತು ಇತರರು ಹೊಡೆದು ಕೊಂದಿದ್ದಾರೆ.

ಫೆಬ್ರವರಿ 8 ರಂದು, ಯೋಧ ಪ್ರಭು ಮತ್ತು ಡಿಎಂಕೆ ಸದಸ್ಯ ಚಿನ್ನಸಾಮಿ ಪೋಚಂಪಲ್ಲಿ ಪ್ರದೇಶದ ಟ್ಯಾಂಕ್ ಬಳಿ ಬಟ್ಟೆ ಒಗೆಯುವ ವಿಚಾರದಲ್ಲಿ ತೀವ್ರ ಮಾತಿನ ಚಕಮಕಿ ನಡೆಸಿದ್ದು, ಕೌನ್ಸಿಲರ್ ಚಿನ್ನಸಾಮಿ ಒಂಬತ್ತು ಮಂದಿಯೊಂದಿಗೆ ಆ ರಾತ್ರಿ ಪ್ರಭು ಮತ್ತು ಅವರ ಸಹೋದರ ಪ್ರಭಾಕರನ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರಭು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಪ್ರಭಾಕರನ್ ಅವರ ದೂರಿನ ಆಧಾರದ ಮೇಲೆ ಪೊಲೀಸರು ಚಿನ್ನಸಾಮಿ ಪುತ್ರ ರಾಜಪಾಂಡಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಿದ್ದು, ಹಲ್ಲೆ ನಡೆದ ದಿನದಿಂದ ತಲೆಮರೆಸಿಕೊಂಡಿರುವ ಚಿನ್ನಸಾಮಿಗಾಗಿ ಹುಡುಕಾಟ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next