Advertisement

ಐಕಳ ಹರೀಶ್‌ ಶೆಟ್ಟಿ ಅವರಿಂದ ಮಹಾದಾನಿ, ಸಮಾಜ ಸೇವಕ ಎಸ್‌. ಎಂ. ಶೆಟ್ಟಿ ಅವರಿಗೆ ಅಭಿನಂದನೆ

02:10 PM Aug 20, 2021 | Team Udayavani |

ಮುಂಬಯಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಸೆ. 5ರಂದು ಮುಂಬಯಿಯಲ್ಲಿ ನಡೆಯಲಿರುವ ಒಕ್ಕೂಟದ ಬಹಿರಂಗ ಅಧಿವೇಶನದ ವಿಶೇಷ ಅತಿಥಿಯಾಗಿ ಭಾಗವಹಿಸಲಿರುವ ಎಸ್‌. ಎಂ. ಶೆಟ್ಟಿ ಗ್ರೂಪ್‌ ಆಫ್‌ ಕಂಪೆನಿ ಇದರ ಅಧ್ಯಕ್ಷ ಬಂಟರ ಸಮಾಜದ ಮಹಾನ್‌ ದಾನಿ, ಬಂಟರ ಸಂಘಗಳ ಪೋಷಕರು, ಮುಂಬಯಿ ಬಂಟರ ಸಂಘದ ಎಸ್‌. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಗಳ ನಿರ್ಮಾತೃ ಮಂಗಳೂರಿನ ಬಂಟರ ಯಾನೆ ನಾಡವರ ಮಾತೃಸಂಘದ ಗೀತಾ ಎಸ್‌. ಎಂ. ಶೆಟ್ಟಿ ಸಭಾಭವನದ ನಿರ್ಮಾತೃ ಎಸ್‌. ಎಂ. ಶೆಟ್ಟಿ ಅವರನ್ನು ಭೇಟಿಯಾಗಿ ಪುಷ್ಪಗುತ್ಛವನ್ನಿತ್ತು ಸ್ವಾಗತಿಸಿ ಅಭಿನಂದಿಸಿದರು.

Advertisement

ಇದನ್ನೂ ಓದಿ:ಚೆಕ್‌ಗೆ ನಕಲಿ ಸಹಿ ಬಳಸಿ 2.50 ಕೋಟಿ ರೂ. ವಂಚಿಸಲೆತ್ನಿಸಿದ ಇಬ್ಬರ ಬಂಧನ

ಎಸ್‌. ಎಂ. ಶೆಟ್ಟಿ ಅವರು ಸಮಾಜದ ಮೇಲೆ ಅತ್ಯಂತ ಪ್ರೀತಿ-ವಿಶ್ವಾಸ ದಿಂದ ಅನೇಕ ಕೊಡುಗೆಗಳನ್ನು ನೀಡಿ ಸಮಾಜದ ಅಭಿವೃದ್ಧಿಗೆ ಕಾರಣ ಕರ್ತರಾದವರು. ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಮುಂದಿನ ದಿನಗಳಲ್ಲಿ ತನ್ನ ಅಪೂರ್ವ ಕೊಡುಗೆಗಳನ್ನು ನೀಡಿ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿಯವರು ಹಾಕಿಕೊಂಡಿರುವ ಸಮಾಜ ಕಲ್ಯಾಣ ಯೋಜನೆಯ ಸಫಲತೆಗೆ ಬೆನ್ನೆಲುಬಾಗಿ ನಿಲ್ಲುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಕೋಶಾಧಿಕಾರಿ ಉಳೂ¤ರು ಮೋಹನದಾಸ ಶೆಟ್ಟಿ ಉಪಸ್ಥಿತರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next