Advertisement

ಮೋದಿ ಹುಟ್ಟು ಹಬ್ಬ: ಜಿಲ್ಲೆಯಲ್ಲಿ ಸೇವಾ ಕಾರ್ಯ

02:37 PM Sep 18, 2020 | Suhan S |

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ 70ನೇ ಜನ್ಮದಿನದ ಅಂಗವಾಗಿ ಜಿಲ್ಲಾ ಬಿಜೆಪಿ ಎಸ್‌ಟಿ ಮೋರ್ಚಾದ ವತಿಯಿಂದ ತಾಲೂಕಿನ ಹರದನಹಳ್ಳಿ, ಅಮಚವಾಡಿ ಸರ್ಕಾರಿ ಶಾಲಾವರಣದಲ್ಲಿ ಸಸಿನೆಟ್ಟು ಸ್ವತ್ಛತಾ ಕಾರ್ಯಕ್ರಮ ನಡೆಸಲಾಯಿತು.

Advertisement

ಈ ವೇಳೆ ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಮೋದಿ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಎಸ್‌ಟಿ ಮೋರ್ಚಾದ ವತಿಯಿಂದ ಜಿಲ್ಲೆಯಲ್ಲಿ ವಿವಿಧ ಸೇವಾ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಸುಂದರ್‌, ಪ್ರಧಾನ ಕಾರ್ಯದರ್ಶಿ ಮಂಗಲಶಿವಕುಮಾರ್‌, ಕಾರ್ಯದರ್ಶಿ ಎಂಆರ್‌ಎಫ್ ಮಹೇಶ್‌, ಜಿಲ್ಲಾ ಎಸ್‌ಟಿ ಮೋರ್ಚಾದ ಅಧ್ಯಕ್ಷ ಜಯಸುಂದರ್‌, ಪ್ರಧಾನ ಕಾರ್ಯದರ್ಶಿ ಶಂಕರ್‌, ಸಾಗಡೆ ನಂಜುಂಡನಾಯಕ, ಕೋಶಾಧ್ಯಕ್ಷ ಯಾನಗಳ್ಳಿ ನಂಜುಂಡನಾಯಕ, ಕಾರ್ಯದರ್ಶಿ ಬಸವಪುರ ಮಹೇಶ್‌, ಚಂದ್ರು, ತಾಲೂಕು ಅಧ್ಯಕ್ಷ ಚಂದ್ರು, ವೇಣುಗೋಪಾಲ್‌ ಇತರರು ಉಪಸ್ಥಿತರಿದ್ದರು.

ಒಬಿಸಿ ಮೋರ್ಚಾದಿಂದ ಸಸಿ ನೆಡುವ ಕಾರ್ಯ :  ಬಿಜೆಪಿ ಒಬಿಸಿ ಮೋರ್ಚಾದ ವತಿಯಿಂದ ನಗರದ ನಂದಿ ಭವನದ ಆವರಣದಲ್ಲಿ ಸಸಿ ನಡೆಲಾಯಿತು. ಮೋರ್ಚಾದ ಟೌನ್‌ ಅಧ್ಯಕ್ಷ ನಂದೀಶ್‌ ನೇತೃತ್ವದಲ್ಲಿ ಸಸಿ ನಡೆಲಾಯಿತು. ಈ ಸಂದರ್ಭದಲ್ಲಿ ಟೌನ್‌ ಪ್ರಧಾನ ಕಾರ್ಯದರ್ಶಿ ಮಹೇಶ್‌, ನಗರ ಘಟಕ ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ರಾಮಸಮುದ್ರ ಶಿವು, ಕಾರ್ಯದರ್ಶಿ ಚಂದ್ರಶೇಖರ್‌, ಮುಖಂಡರಾದ ಡಾ. ಎ.ಆರ್‌.ಬಾಬು, ಎಂ.ಎಸ್‌. ಫ‌ೃಥ್ವಿರಾಜ್‌, ಸಿಂಡಿಕೇಟ್‌ ಸದಸ್ಯ ಪ್ರದೀಪ್‌ದೀಕ್ಷಿತ್‌, ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಶಿವುವಿರಾಟ್‌, ನಗರಸಭಾ ಸದಸ್ಯ ಮಂಜುನಾಥ್‌, ಮಹೇಶ್‌ ಸೂರ್ಯಕುಮಾರ್‌, ಮಹದೇವಸ್ವಾಮಿ, ರುದ್ರೇಶ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next