Advertisement

ಹಾವು ಮಾರಾಟ: ನಾಲ್ವರು ಸೆರೆ

10:19 AM Feb 21, 2019 | |

ಹುಣಸೂರು: ಎರಡು ತಲೆಯ ಹಾವೆಂದು ನಂಬಿಸಿ ಏಕ ತಲೆಯ ಹಾವನ್ನು ಮಾರಾಟ ಮಾಡಲೆತ್ನಿಸುತ್ತಿದ್ದ ನಾಲ್ವರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಎಚ್‌.ಡಿ.ಕೋಟೆ ತಾಲೂಕಿನ ಟೈಗರ್‌ ಬ್ಲಾಕ್‌ನ ಹಕ್ಕಿಪಿಕ್ಕಿ ಜನಾಂಗದ ಅರವಿಂದ್‌, ಕೊಡಗಿನ ನಿಡುಗಾಣಿ ಗ್ರಾಮದ ಕಾವೇರಪ್ಪ, ಕಾಲೂರಿನ ಸೋಮಯ್ಯ, ವಿರಾಜಪೇಟೆ ಬಳಿಯ ಮಲ್ಮಾರೆ ಗ್ರಾಮದ ಅಭಿಷೇಕ್‌ ಬಂಧಿತ ಆರೋಪಿಗಳು. ಪೊಲೀಸ್‌ ದಾಳಿ ಸುಳಿವರಿತ ಮೂವರು
ಪರಾರಿಯಾಗಿದ್ದಾರೆ.

Advertisement

ಘಟನೆ ವಿವರ: ಈ ಆರೋಪಿಗಳು ಮಂಗಳವಾರ ಮಧ್ಯರಾತ್ರಿ ನಗರಕ್ಕೆ ಸಮೀಪದ ಹೆದ್ದಾರಿಯ ಹಾಳಗೆರೆ ವೃತ್ತದ ಬಳಿಯ ಹೋಟೆಲ್‌ ಅಮೃತ ಬಳಿ ಸ್ಕೂಟರ್‌ ನಿಲ್ಲಿಸಿಕೊಂಡು ಹಾವಿನ ಮಾರಾಟಕ್ಕೆ ಯತ್ನಿಸುತ್ತಿದ್ದ ಬಗ್ಗೆ ಎಸ್ಸೆ„ ಮಹೇಶ್‌ರಿಗೆ ಬಂದ ಖಚಿತ ಮಾಹಿತಿ ಮೇರೆಗೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಸುತ್ತುವರೆದು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ದಾಳಿ ವೇಳೆ ಜಿಪ್ಸಿ ಹಾಗೂ ಸ್ಕೂಟರ್‌ ಹಾಗೂ ಹಾವನ್ನು ವಶಕ್ಕೆ ಪಡೆದಿದ್ದಾರೆ. ಟೈಗರ್‌ ಬ್ಲಾಕ್‌ನ ಅರವಿಂದ ಹಾವನ್ನು ಹಿಡಿದು ಕೊಡಗಿನವರ ಸಹಕಾರದಲ್ಲಿ ಇತರೆಡೆಗೆ ಒಂದು ಲಕ್ಷ ರೂ.ಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಎಸ್ಸೆ„ ಮಹೇಶ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next