Advertisement

ಗಣೇಶ ಮೂರ್ತಿಯ ಕೊರಳಿನಲ್ಲಿ ನಿಜ ನಾಗರ

08:44 PM Sep 12, 2021 | Team Udayavani |

ದಾವಣಗೆರೆ: ಶ್ರೀಗಣೇಶ ಮೂರ್ತಿಯ ಕೊರಳಲ್ಲಿ ನಿಜನಾಗರವೊಂದು ಕೆಲಹೊತ್ತು ಸುತ್ತಿ ಹೆಡೆಬಿಚ್ಚಿ  ವಿಶೇಷ ದರ್ಶನ ನೀಡಿದ ಘಟನೆ  ತಾಲೂಕಿನ  ಕೈದಾಳೆ ಗ್ರಾಮದ ಮೇಗಳಹಟ್ಟಿಯಲ್ಲಿ  ಕಂಡು ಬಂದಿದೆ.

Advertisement

ಮೇಗಳಹಟ್ಟಿಯಲ್ಲಿ  ಪ್ರತಿಷ್ಠಾಪಿಸಿದ  ಗಣೇಶನ ಮೂರ್ತಿ ಬಳಿ ರವಿವಾರ ಬಂದ ನಾಗರ ಹಾವೊಂದು ಸರಸರನೇ ಗಣೇಶ ಮೂರ್ತಿ ಏರಿ ಸರಿಯಾಗಿ ಗಜಾನನ ಕೊರಳಿಗೆ ಸುತ್ತಿಕೊಂಡು ಹೆಡೆ ಎತ್ತಿತ್ತು. ಇದನ್ನು ಕಂಡ ಭಕ್ತರು ಆಶ್ಚರ್ಯಚಕಿತರಾಗಿ ನೋಡಿ, ವಿಶೇಷ ಪೂಜೆ ಸಲ್ಲಿಸಿದರು.

ಈ ವಿಷಯ ಮಿಂಚಿನಂತೆ ಹಬ್ಬಿ ಈ ಅಪರೂಪದ ದೃಶ್ಯ ಕಣ್ತುಂಬಿಕೊಳ್ಳಲು ಜನರು ಸೇರಿಸಿದರು.  ಹಲವರು ಈ ವಿಶೇಷ ದೃಶ್ಯ ಕಂಡು ಧನ್ಯತೆಯ ಭಾವ ಮೆರೆದರು.

Advertisement

Udayavani is now on Telegram. Click here to join our channel and stay updated with the latest news.

Next