Advertisement

ಮರಳಿ ಕಾಡು ಸೇರಿದ ಬೇಕರಿಗೆ ಬಂದ ಹಾವು

03:53 PM Dec 13, 2021 | Team Udayavani |

ದಾಂಡೇಲಿ: ಬೇಕರಿಯೊಂದರ ಮೇಲ್ಚಾವಣಿ ಏರಿ ಕುಳಿತಿದ್ದ ಹಾವನ್ನು ಸುರಕ್ಷಿತವಾಗಿ ಹಿಡಿದು ಮರಳಿಕಾಡಿಗೆ ಬಿಟ್ಟು ಬಂದ ಘಟನೆ ನಗರದ ಬಸ್ ನಿಲ್ದಾಣದ ಹತ್ತಿರದಲ್ಲಿರುವ ಬೇಕ್ & ಬೈಟ್ ಬೇಕರಿಯಲ್ಲಿ ಭಾನುವಾರ ಸಂಜೆ ನಡೆದಿದೆ.

Advertisement

ಬೇಕರಿಯ ಮೇಲ್ಚಾವಣಿಯಲ್ಲಿ ಹಾವು ಕಾಣಿಸಿಕೊಂಡಿರುವುದನ್ನು ನೋಡಿದ ಬೇಕರಿಯವರು ಒಮ್ಮೆ ಹೌಹಾರಿದರು. ಕೂಡಲೆ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಸಂತೋಷ ಅವರು ಆಗಮಿಸಿ, ಹಾವನ್ನು ಸುರಕ್ಷಿತವಾಗಿ ಹಿಡಿದು ಮರಳಿಕಾಡಿಗೆ ಬಿಟ್ಟು ಬರುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅರಣ್ಯ ಇಲಾಖೆಯಲ್ಲಿ ಅರಣ್ಯದ ಜೊತೆ ಜೊತೆಗೆ ವನ್ಯಪ್ರಾಣಿಗಳ ಸಂರಕ್ಷಣೆಯ ದೃಷ್ಟಿಯಿಂದ ಇಂತಹ ಸಿಬ್ಬಂದಿಗಳ ಸೇವೆ ದಾಂಡೇಲಿಗೆ ಅತೀ ಅವಶ್ಯವಾಗಿದೆ. ಕಳೆದ ಹಲವಾರು ವರ್ಷಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟು ಬಂದಿರುವ ಶ್ರೇಯಸ್ ಸಂತೋಷ ಅವರಿಗೆ ಸಲ್ಲುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next